ಶತ್ರುವಿನೊಂದಿಗೂ ಕರುಣೆ ತೋರಿ ಉದಾತ್ತ ಮಾದರಿಯನ್ನು ಮುಂದಿಟ್ಟ ಪ್ರವಾದಿ ಮುಹಮ್ಮದ್ (ಸ) ರವರ ನಡೆ-ನುಡಿಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸುವ ಬದಲು
ತಮ್ಮ ಸಿದ್ಧಾಂತಗಳಿಗೆ ಧಾರ್ಮಿಕ ಲೇಪನ ಹಚ್ಚಿ ಸಮರ್ಥಿಸುವುದಕ್ಕಾಗಿ ಅವುಗಳನ್ನು ದುರ್ವ್ಯಾಖ್ಯಾನಗೊಳಿಸುವ ಪ್ರವೃತ್ತಿ ಖಂಡನೀಯ ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ಖಡ್ಗವೆತ್ತಿದ್ದ ಶತ್ರುವೊಬ್ಬನು ನಿರಾಯುಧನಾದಾಗ
ಅವನ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶ ಪ್ರವಾದಿಗಳಿಗಿತ್ತು. ಆದರೆ ಅವರು ಅವನನ್ನು ಕ್ಷಮಿಸಿ ಕಳುಹಿಸಿಕೊಟ್ಟರು.
ಪ್ರವಾದಿಯವರ ಉದಾತ್ತ ಜೀವನ ಸಂದೇಶಕ್ಕೆ ಮಾದರಿಯಾದ ಈ ಘಟನೆಯನ್ನು ವಿಕಲವಾಗಿ ವ್ಯಾಖ್ಯಾನಿಸಿ ಪ್ರವಾದಿಗಳು ಪ್ರತೀಕಾರ ತೀರಿಸುವಂತೆ ಪಿ ಎಫ್ ಐ ಸಂಘಟನೆಯು ಕೇರಳದಲ್ಲಿ ನಡೆಸಿದ ಸಮ್ಮೇಳನ ಒಂದರಲ್ಲಿ ಭಾಷಣ ಮಾಡಲಾಗಿದೆ. ಇದು ಸ್ಪಷ್ಟವಾದ ಪ್ರವಾದಿ ನಿಂದನೆಯಾಗಿದ್ದು, ಇಸ್ಲಾಮಿನ ಬಗ್ಗೆ
ಕೋಮುವಾದ, ಭಯೋತ್ಪಾದನೆಗಳನ್ನು ಆರೋಪಿಸುತ್ತಿರುವ ಸಂಘಪರಿವಾರಕ್ಕೆ ಅವರ ವಾದಗಳನ್ನು ಮತ್ತಷ್ಟು ಹರಡಲು
ಇಂತಹ ಹೇಳಿಕೆಗಳು
ಸರಕಾಗುತ್ತಿದೆ.
ಇದು ಅಕ್ಷಮ್ಯವಾಗಿದ್ದು, ಇಂತಹ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ಸಮಾಜವು ಜಾಗೃತವಾಗಿರಬೇಕು ಎಂದು ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿಎಂ ಕಾಮಿಲ್ ಸಖಾಫಿ ಕರೆ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ