janadhvani

Kannada Online News Paper

ಕೆಸಿಎಫ್ ಡಿಸೇನಿಯಂ ಪ್ರಚಾರಾರ್ಥ- ನಾಳೆ ಪುತ್ತೂರಿನಲ್ಲಿ ಕಲ್ಚರಲ್ ಕನ್ವೆನ್ಷನ್

ಪುತ್ತೂರು : ಅನಿವಾಸಿ ಭಾರತೀಯರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ದಶಮಾನೋತ್ಸವ ಮಹಾಸಮ್ಮೇಳನವು ಇದೇ ಬರುವ 2024 ಮೇ 19 ರಂದು ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿದ್ದು, ಅದರ ಪ್ರಚಾರಾರ್ಥವಾಗಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸುನ್ನಿ ಸಂಘಟನೆಯ ವತಿಯಿಂದ ನಾಳೆ (2024 ಮೇ 8 ಬುಧವಾರ) ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.30 ರ ತನಕ ಮಹಾವೀರ್ ಹಾಲ್ ಪುತ್ತೂರಿನಲ್ಲಿ ‘ಸಂಸ್ಕೃತಿಯ ಸಂರಕ್ಷಕರಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಲ್ಚರಲ್ ಕನ್ವೆನ್ಷನ್ ನಡೆಯಲಿದೆ.

ಕಾರ್ಯಕ್ರಮದ ಕೇಂದ್ರ ಬಿಂದು ಪ್ರಮುಖ ವಾಗ್ಮಿಯೂ, ಚಿಂತಕರಾದ ಮೌಲಾನ ತ್ವಾಹಿರ್ ಸಖಾಫಿ ಮಂಜೇರಿರವರು ಆಗಮಿಸಲಿದ್ದು, ಮುಖ್ಯ ತರಗತಿ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುನ್ನಿ ಸಂಘಟನಾ ನಾಯಕರು, ಚಿಂತಕರೂ, ಪ್ರಮುಖ ವಾಗ್ಮಿಯೂ ಆದ ಡಾ. ಎಮ್ಮೆಸ್ಸೆಮ್ ಝೈನಿ ಕಾಮಿಲ್ ಸಖಾಫಿ, ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ನಾಯಕರಾದ ತೋಕೆ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎಂ. ಎಂ. ಕಾಮಿಲ್ ಸಖಾಫಿ ಉಸ್ತಾದರು ಭಾಗವಹಿಸಲಿದ್ದಾರೆ.

ಅಲ್ಲದೇ ಕಾರ್ಯಕ್ರಮದಲ್ಲಿ ಸಾದಾತರು, ವಿವಿಧ ಸುನ್ನಿ ಸಂಘಟನಾ ಉಲಮಾ, ಉಮರಾ ನಾಯಕರು, ಕೆಸಿಎಫ್ ಅಂತರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯಾದ್ಯಂತ ಬರುವ ಎಲ್ಲಾ ಸುನ್ನಿ ಸಂಘಟನಾ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಅಧ್ಯಕ್ಷರೂ ಹಾಗೂ ಕೆಸಿಎಫ್ ಡಿಸೇನಿಯಂ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಯೂಸುಫ್ ಸಯೀದ್ ಪುತ್ತೂರು
(ಪ್ರಚಾರ ವಿಭಾಗ, ಕೆಸಿಎಫ್ ಡಿಸೇನಿಯಂ ನಿರ್ವಹಣಾ ಸಮಿತಿ ದ. ಕ. ಈಸ್ಟ್ ಜಿಲ್ಲೆ)

error: Content is protected !! Not allowed copy content from janadhvani.com