✍️ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ (ರಾಜ್ಯಾಧ್ಯಕ್ಷರು: ಎಸ್ಸೆಸ್ಸೆಫ್ ಕರ್ನಾಟಕ)
ಹೆಸರು ಬೇರೆ ಬೇರೆ ಆಗಿರಬಹುದು ಆದರೆ ಎಲ್ಲವೂ ಒಂದೇ. ಅವರು ಸಮುದ್ರದಾಚೆ ಖಿದ್ಮತ್ ಮಾಡುವ ಕಾರಣ ಕೆಸಿಎಫ್ ಎಂದು ಹೆಸರು ಹಾಕಿದರು ಅಷ್ಟೇ.
ಅಂದು ಕರ್ನಾಟಕ ಉಲಮಾ ಒಕ್ಕೂಟದ ಆದರಣೀಯ ಅಧ್ಯಕ್ಷರಾಗಿದ್ದ ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಕೆಸಿಎಫ್ ಸಂಘಟನೆಗೆ ಚಾಲನೆ ನೀಡಿ ಇಂದಿಗೆ ಹತ್ತು ಸಂವತ್ಸರಗಳು ಕಳೆದಿವೆ. ಗಲ್ಫ್ ರಾಷ್ಟ್ರಗಳ ಕಟ್ಟುನಿಟ್ಟಿನ ಕಾನೂನು, ಮುಂಜಾನೆಯಿಂದ ಮುಸ್ಸಂಜೆ ತನಕ ಇರುವ ಕೆಲಸದ ಒತ್ತಡ, ಯಾವುದೋ ಊರಿನಿಂದ ಬಂದು ಎಲ್ಲೆಲ್ಲೋ ದುಡಿಯುವ ಅನಿವಾಸಿಗಳ ಮಧ್ಯೆ ನಮ್ಮವರನ್ನು ಹುಡುಕಿ ಸಂಘಟನೆಗೆ ಸೆಳೆಯುವ ಚಾಲೆಂಜು! ಈ ರೀತಿಯ ಪ್ರತಿಕೂಲ ವಾತಾವರಣಗಳ ಮಧ್ಯೆಯೂ ನಮ್ಮ ಕೆಸಿಎಫ್ ನಾಯಕರ ಇಚ್ಛಾಶಕ್ತಿಯ ಫಲವಾಗಿ ಹತ್ತು ವರ್ಷಗಳಲ್ಲಿ ನೂರು ವರ್ಷಗಳ ಸಾಧನೆ ಮಾಡಿ ಮುಗಿಸಿದೆ.
ಉತ್ತರ ಕರ್ನಾಟಕದಲ್ಲಿ ನಡೆಸಿದ ಶೈಕ್ಷಣಿಕ ಚಳವಳಿ, ಸಾಂತ್ವನ ಸೇವೆಗಳ ಸಿಹಿ ಸ್ಪರ್ಷ, ಅನಿವಾಸಿ ಮಿತ್ರರಲ್ಲಿ ಮೂಡಿಸಿದ ಧಾರ್ಮಿಕ ಜಾಗೃತಿ, ಕೊರೋನ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ಕೆಸಿಎಫ್ ಸ್ವಯಂ ಸೇವಕ ತಂಡ ನಡೆಸಿದ ಮಿಂಚಿನ ಸಂಚಲನ. ಹೀಗೆ ನೂರಾರು ಕಥೆ ಹೇಳಲಿಕ್ಕಿದೆ ಈ ಹತ್ತು ವರ್ಷಗಳಿಗೆ.
ಕೆಸಿಎಫ್ ಕಡಲಾಚೆ ಬಹಳಷ್ಟು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿದೆ. ಆದರೆ ಹತ್ತರ ಸಂಭ್ರಮವನ್ನು ತಾಯ್ನಾಡಿನ ಸುನ್ನೀ ಸಂಘ ಕುಟುಂಬದ ಜೊತೆ ಸೇರಿ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಜಾಗತಿಕ ಸುನ್ನೀ ಶಕ್ತಿಯ ಸುಲ್ತಾನ್ ಸಮಾರಂಭದ ಸಾರಥ್ಯ ವಹಿಸಲಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ಸಮ್ಮೇಳನ ಐತಿಹಾಸಿಕ ಗೊಳಿಸಲೇ ಬೇಕಿದೆ.
ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಇಂದಿನಿಂದ ಡಿವಿಷನ್ ಸಂಚಲನ ಹಮ್ಮಿಕೊಂಡಿದೆ. ಇಂದು ಬೆಳಿಗ್ಗೆ 7ಗಂಟೆಗೆ ಸುಳ್ಯದಿಂದ ಆರಂಭವಾಗಲಿರುವ ಡಿವಿಷನ್ ಸಂಚಲನದ ಧ್ವಜ ಹಸ್ತಾಂತರ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ನಡೆಸಿಕೊಡಲಿದ್ದಾರೆ. ನಿಮ್ಮ ಡಿವಿಷನ್ಗೆ ನಾವು ಬರುವಾಗ ನಮ್ಮೆಲ್ಲಾ ಕಾರ್ಯಕರ್ತರು ಒಟ್ಟು ಸೇರಿ ಸಹಕರಿಸುವಿರಿ ಎಂಬ ನಿರೀಕ್ಷೆ ಇದೆ. ಮೇ ಹತ್ತೊಂಬತ್ತರ ಹಬ್ಬಕ್ಕೆ ಮೂರು ದಿನ ಮಾತ್ರ ಬಾಕಿ ಇರುವಾಗ ಹಬ್ಬದ ಸಂಭ್ರಮ ಇಂದಿನಿಂದಲೇ ಭರ್ಜರಿಯಾಗಿ ನಡೆಸೋಣ. ನಾವು ಹೊರಟಿದ್ದೇವೆ, ಇನ್ನು ನಿಮ್ಮ ಊರಲ್ಲಿ ಒಟ್ಟು ಸೇರೋಣ.
















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ