janadhvani

Kannada Online News Paper

ಕೆಸಿಎಫ್ ರಿಯಾದ್ ಝೋನ್:ಎಂ ಆರ್ ಎಫ್ ನಿಧಿಗೆ ಚಾಲನೆ

ರಿಯಾದ್: ಕೆಸಿಎಫ್ ರಾಷ್ಟ್ರೀಯ ಸಮಿತಿಯು ತನ್ನ ಕಾರ್ಯಕರ್ತರಿಗಾಗಿ ಹೊರತಂದ MRF(ಮೆಂಬರ್ಸ್ ರಿಲೀಫ್ ಫಂಡ್) ಸಾಂತ್ವನ ನಿಧಿ ಯೋಜನೆಯ ರಿಯಾದ್ ಝೋನ್ ಮಟ್ಟದ ಕಾರ್ಯಕ್ರಮವು ಕೆಸಿಎಫ್ ಸೆಂಟರ್ ನಲ್ಲಿ ನಡೆಯಿತು.

ಇಲ್ಯಾಸ್ ಲತೀಫಿಯವರ ಅಧ್ಯಕ್ಷತೆಯಲ್ಲಿ, ಎಜುಕೇಶನ್ ಇಲಾಖೆಯ ಅಧ್ಯಕ್ಷರಾದ ಇಲ್ಯಾಸ್ ಲತೀಫಿ ಅವರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು, ರಿಯಾದ್ ಝೋನ್ ಕಾರ್ಯದರ್ಶಿ ನಿಜಾಮುದ್ದೀನ್ ಉಸ್ಮಾನ್ ಸ್ವಾಗತಿಸಿ,ರಾಷ್ಟ್ರೀಯ ಸಮಿತಿ ಎಜುಕೇಶನ್ ಇಲಾಖೆಯ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಉಸ್ತಾದರು ಉದ್ಘಾಟಿಸಿದರು.

ಎಂ ಆರ್ ಎಫ್ ಗುರುತಿನ ಚೀಟಿಯನ್ನು ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ರಿಯಾದ್ ಝೋನ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ರಮೀಜ್ ಕುಳಾಯಿ ಗೆ ನೀಡುವ ಮೂಲಕ ಚಾಲನೆ ನೀಡಿದರು. ನಂತರ ಬಶೀರ್ ತಲಪ್ಪಾಡಿ ವಿಶ್ಲೇಷಣೆ ನೀಡಿ , ರಿಯಾದ್ ಝೋನ್ ಸಂಘಟನಾ ಇಲಾಖೆಯ ಕಾರ್ಯದರ್ಶಿ ಅಶ್ರಫ್ ಕಿಲ್ಲೂರ್ ವಂದಿಸಿದರು.

error: Content is protected !! Not allowed copy content from janadhvani.com