ಅಜ್ಮಾನ್: 2019 ನೇ ಸಾಲಿನ ಗಲ್ಫ್-ಇಶಾರ ಚಂದದಾರ ಅಭಿಯಾನದಲ್ಲಿ ಅತೀ ಹೆಚ್ಚು ಗಲ್ಫ್-ಇಶಾರ ಚಾಂದಾದಾರರನ್ನು ಸೇರಿಸಿದ ಒಬ್ಬನಿಗೆ ಘೋಷಿಸಿದ ಉಚಿತ ಉಮ್ರಾ ಯಾತ್ರೆಯು ಕೆಸಿಎಫ್ ಅಜ್ಮಾನ್ ಝೋನ್ ವೆಲ್ಫೇರ್ ವಿಭಾಗದ ಕಾರ್ಯದರ್ಶಿ ಅಬ್ದುಲ್ ಹಕೀಂ ಸವಣೂರು ಪಾಲಾಗಿದೆ.
ಗೋಲ್ಡ್ ಕಾಯಿನ್ ಕೆಸಿಎಫ್ ಅಜ್ಮಾನ್ ಝೋನ್ ಕಾರ್ಯಕಾರಿ ಸಮಿತಿ ಸದಸ್ಯ ಶಮೀರ್ ಮಂಗಳಪೇಟೆ ಪಾಲಾಯಿತು. ಬ್ಯಾಂಡೆಡ್ ಸನ್ ಗ್ಲಾಸ್ ಸಂಘಟನಾ ವಿಭಾಗದ ಕಾರ್ಯದರ್ಶಿ ಖಾದರ್ ಕೊಡಿಪ್ಪಾಡಿ ಅರ್ಹವಾಗಿಯೇ ಪಡೆದುಕೊಂಡರು. ಒಟ್ಟಿನಲ್ಲಿ ಮೂರೂ ಗಿಫ್ಟ್ ಗಳನ್ನು ಬಾಚಿಕೊಂಡ ಅಜ್ಮಾನ್ ಝೋನ್ ಅತ್ಯುತ್ತಮ ಝೋನ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಯುಎಇಯಾದ್ಯಂತ ನವ ಸಂಚಲನ ಸೃಷ್ಟಿಸಿದ ಗಲ್ಫ್-ಇಶಾರ ಚಂದಾ ಅಭಿಯಾನವು ಝೋನ್ ಗಳ ಮಧ್ಯ ತೀವ್ರ ಪೈಪೋಟಿಯನ್ನುಂಟುಮಾಡಿತ್ತು. ತಮ್ಮ ಝೋನಿನ ನಿರ್ಣಾಯಕ ಪಾತ್ರದ ಬಗ್ಗೆ ನ್ಯಾಷನಲ್ ಸಮಿತಿಯ ಗಮನ ಸೆಳೆಯುವ ಸಲುವಾಗಿ ನಾಯಕರಿಂದ ಹಿಡಿದು ಎಲ್ಲಾ ಕಾರ್ಯಕರ್ತರೂ ರಂಗಕ್ಕಿಳಿದು ಕಾರ್ಯಾಚರಣೆ ನಡೆಸಿದ್ದರು. ಗಲ್ಫ್ ಇತಿಹಾಸದಲ್ಲೇ ಕನ್ನಡ ಮಾಸಿಕವೊಂದು ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದ್ದರೂ ಅದನ್ನು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನಿಗೂ ತಲುಪಿಸಬೇಕಾದ ಅನಿವಾರ್ಯತೆ ಪ್ರತೀ ಝೋನಿನ ಪಬ್ಲಿಕೇಶನ್ ವಿಭಾಗದ ಜವಾಬ್ದಾರಿಯಾಗಿತ್ತು. ಸ್ಪರ್ಧಾತ್ಮಕ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಝೋನ್,ಸೆಕ್ಟರ್, ಯೂನಿಟ್ ಮಟ್ಟದ ನಾಯಕರು, ಕಾರ್ಯಕರ್ತರು ಪ್ರತಿಯೊಬ್ಬ ಅನಿವಾಸಿ ಕನ್ನಡಿಗರನ್ನು ಹುಡುಕಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಅಭಿಯಾನದ ಪ್ರಯುಕ್ತ ಅತೀ ಹೆಚ್ಚು ಚಾಂದಾದಾರರನ್ನು ಸೇರಿಸಿದ ಒಬ್ಬನಿಗೆ ಉಚಿತ ಉಮ್ರಾ ಯಾತ್ರೆ ಹಾಗೂ ಗೋಲ್ಡ್ ಕಾಯಿನ್ ಮತ್ತು ಸನ್ ಗ್ಲಾಸ್ ಗಿಫ್ಟ್ ನೀಡುವುದಾಗಿ ಘೋಷಿಸಲಾಗಿತ್ತು. ಇದೀಗ ಆ ಮೂರು ಕೊಡುಗೆಗಳು ಕೆಸಿಎಫ್ ಅಜ್ಮಾನ್ ಝೋನ್ ಪಾಲಾಗಿದೆ.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ