ಕುಂಬ್ರ : ಎಸ್ಸೆಸ್ಸಫ್ ಮೈದಾನಿಮೂಲೆ ಶಾಖೆ ಇದರ ವಾರ್ಷಿಕ ಮಹಾಸಭೆ ಎಸ್ಸೆಸ್ಸಫ್ ಮೈದಾನಿಮೂಲೆ ಶಾಖೆಯಲ್ಲಿ ರಫೀಕ್ ಇಮ್ದಾದಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸೆಕ್ಟರ್ ವೀಕ್ಷಕರಾಗಿ ಶಫೀಕ್ ಮಾಸ್ಟರ್ ತಿಂಗಳಾಡಿ, ಇಮ್ರಾನ್ ರೆಂಜಲಾಡಿ ಆಗಮಿಸಿ ಸಹಕರಿಸಿದರು.
ಎಸ್ಸೆಸ್ಸಫ್ ಮೈದಾನಿಮೂಲೆ ಶಾಖೆ ಯ ನೂತನ ಅಧ್ಯಕ್ಷರಾಗಿ ಜಮಾಲುದ್ದೀನ್ ಎನ್.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ನೀರ್ಪಾಡಿ, ಕೋಶಾಧಿಕಾರಿಯಾಗಿ ಆಸಿಫ್ ನೀರ್ಪಾಡಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಶಿಕ್ ಉಜ್ರೋಡಿಯನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರನ್ನಾಗಿ ಹಾರಿಸ್ ಎನ್, ಮುನೀರ್ ಎನ್, ಜೊತೆ ಕಾರ್ಯದರ್ಶಿಗಳಾಗಿ ಸಹದ್ ಎಂ.ಎಂ, ಆಶಿಕ್ ಸಿ.ಹೆಚ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಫಾರೂಕ್ ಇ.ಎ , ಶಿಹಾಬುದ್ದೀನ್ ಎನ್.ಕೆ, ಅಸ್ಕರ್ ಎನ್, ಸಯೀದ್ ಎಂ.ಎಂ, ಇಲ್ಯಾಸ್ ಕೆ.ಎಂ, ಸಫ್ವಾನ್ ಉಜ್ರೋಡಿ, ಹನೀಫ್ ಮಾವಿನಡಿ, ನಾಸಿರ್ ಪಾರೆ ಇವರನ್ನು ಆರಿಸಲಾಯಿತು.
ಸಹದ್ ಸ್ವಾಗಿತಿಸಿ, ಆಶಿಕ್ ಉಜ್ರೋಡಿ ಧನ್ಯವಾದ ಸಲ್ಲಿಸಿದರು.