ಮಂಗಳೂರು: ನರೇಂದ್ರ ಮೋದಿ ಯವರು ತಮ್ಮ ಪಕ್ಷದ ಸೋಲಿನ ಹತಾಶೆಯಿಂದ ದೇಶದ ಸಂಪತ್ತನ್ನು ಮರು ಹಂಚಿಕೆಯ ಪ್ರಸ್ತಾಪ ಮಾಡಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ದೂರುತ್ತಿದ್ದಾರೆ ಮತ್ತು ಆ ಮೂಲಕ ದ್ವೇಷ ಹರಡಲು ಪ್ರಯತ್ನಿಸಿರುವುದು ವಿಷಾದಕರ.
ಈ ದೇಶಕ್ಕಾಗಿ ಚರಿತ್ರೆಯ ಮುಸ್ಲಿಮರು,ಆಡಳಿತಗಾರರು ಅವರ ಸರ್ವಸ್ವವನ್ನೂ ಕೊಡುಗೆ ನೀಡಿ ಈ ದೇಶವನ್ನು ನಿರ್ಮಾಣ ಮಾಡಿದ್ದಾರೆ. ಮೊಗಲರು, ಸುಲ್ತಾನರು, ಕಬೀರರು, ಸೂಫಿಗಳು ಸಂತರು ಈ ದೇಶಕ್ಕೆ ಅರ್ಪಿಸಿದ ಕೊಡುಗೆಗಳನ್ನು ಮೋದಿಯವರು ಅರಿಯ ಬೇಕು ಎಂದು ಕೆ. ಅಶ್ರಫ್ ಅವರು ಪ್ರತಿಕ್ರಿಯಿಸಿದ್ದಾರೆ.
ಕೆಂಪು ಕೋಟೆ, ತಾಜ್ ಮಹಲ್, ಗೋಲ್ ಗುಂಬಜ್,ಮಿನಾರ್ ಗಳಂತಹ ವಾಸ್ತು ಶಿಲ್ಪ, ಮೊಗಲ್, ಟಿಪ್ಪು ಸುಲ್ತಾನ್ ಆಡಳಿತ, ಈ ದೇಶದ ರಕ್ಷಣೆಗೆ ಮತ್ತು ಸ್ವಾತಂತ್ರ್ಯಕ್ಕಾಗಿ ನೀಡಿದ ಬಲಿದಾನ, ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಅಜಾದ್ ರವರು ಈ ದೇಶಕ್ಕೆ ನೀಡಿದ ಶಿಕ್ಷಣ ದಂತಹ ಕೊಡುಗೆಯ ಪ್ರತಿಪಲದ ಅನುಪಾತದ ಪ್ರಯೋಜನ ಇನ್ನೂ ಹಾಲಿ ಭಾರತದ ಮುಸ್ಲಿಮರು ಬಯಸಿಲ್ಲ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಿಟ್ಟ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಮುಸ್ಲಿಮರು ಇಂದು ಮೀಸಲಾತಿಯ ಪ್ರಯೋಜನ ಅಪೇಕ್ಷಿಸಿದ್ದನ್ನು ಮೋದಿಯವರು ಕೋಮು ಮನಸ್ಥಿತಿಯಿಂದ ಅಳೆದರೆ ಅದು ಅವರ ಅಜ್ಞಾನ ಮತ್ತು ಕೀಳುಮಟ್ಟದ ರಾಜಕೀಯವನ್ನು ಬಿಂಬಿಸಿದೇ ಹೊರತು ಬೇರೇನೂ ಅಲ್ಲ.
ಮೋದಿಯವರು ಮುಸ್ಲಿಮರನ್ನು ಅಧಿಕ ಮಕ್ಕಳಿರುವವರು ಎಂದು ಸಂಭೋದಿಸಿದರೆ, ಅಂತಹ ಮಕ್ಕಳನ್ನು ಈ ದೇಶದ ರಕ್ಷಣೆಗಾಗಿ ಮೀಸಲಿಡಲಿದ್ದೇವೆ. ಮೋದಿಯವರು ತಮ್ಮ ರಾಜ್ಯದಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಾತ್ಮ ಗಾಂದಿ,ವಲ್ಲಭಭಾಯಿ ಪಟೇಲ್ ಹೊರತಾದ ಇತರರ ಹೆಸರನ್ನು ಹುಡುಕುವ ಧೈರ್ಯವನ್ನಾದರೂ ಮಾಡಲಿ. ಮೋದಿಯವರು ತಮ್ಮ ನಿರ್ಗಮನ ವೇಳೆಯಲ್ಲಿಯಾದರೂ ರಾಜಧರ್ಮದ ಕಿಂಚಿತ್ ತತ್ವವನ್ನಾದರೂ ಪಾಲಿಸಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್,
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)