ಮಂಗಳೂರು: ನರೇಂದ್ರ ಮೋದಿ ಯವರು ತಮ್ಮ ಪಕ್ಷದ ಸೋಲಿನ ಹತಾಶೆಯಿಂದ ದೇಶದ ಸಂಪತ್ತನ್ನು ಮರು ಹಂಚಿಕೆಯ ಪ್ರಸ್ತಾಪ ಮಾಡಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ದೂರುತ್ತಿದ್ದಾರೆ ಮತ್ತು ಆ ಮೂಲಕ ದ್ವೇಷ ಹರಡಲು ಪ್ರಯತ್ನಿಸಿರುವುದು ವಿಷಾದಕರ.
ಈ ದೇಶಕ್ಕಾಗಿ ಚರಿತ್ರೆಯ ಮುಸ್ಲಿಮರು,ಆಡಳಿತಗಾರರು ಅವರ ಸರ್ವಸ್ವವನ್ನೂ ಕೊಡುಗೆ ನೀಡಿ ಈ ದೇಶವನ್ನು ನಿರ್ಮಾಣ ಮಾಡಿದ್ದಾರೆ. ಮೊಗಲರು, ಸುಲ್ತಾನರು, ಕಬೀರರು, ಸೂಫಿಗಳು ಸಂತರು ಈ ದೇಶಕ್ಕೆ ಅರ್ಪಿಸಿದ ಕೊಡುಗೆಗಳನ್ನು ಮೋದಿಯವರು ಅರಿಯ ಬೇಕು ಎಂದು ಕೆ. ಅಶ್ರಫ್ ಅವರು ಪ್ರತಿಕ್ರಿಯಿಸಿದ್ದಾರೆ.
ಕೆಂಪು ಕೋಟೆ, ತಾಜ್ ಮಹಲ್, ಗೋಲ್ ಗುಂಬಜ್,ಮಿನಾರ್ ಗಳಂತಹ ವಾಸ್ತು ಶಿಲ್ಪ, ಮೊಗಲ್, ಟಿಪ್ಪು ಸುಲ್ತಾನ್ ಆಡಳಿತ, ಈ ದೇಶದ ರಕ್ಷಣೆಗೆ ಮತ್ತು ಸ್ವಾತಂತ್ರ್ಯಕ್ಕಾಗಿ ನೀಡಿದ ಬಲಿದಾನ, ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಅಜಾದ್ ರವರು ಈ ದೇಶಕ್ಕೆ ನೀಡಿದ ಶಿಕ್ಷಣ ದಂತಹ ಕೊಡುಗೆಯ ಪ್ರತಿಪಲದ ಅನುಪಾತದ ಪ್ರಯೋಜನ ಇನ್ನೂ ಹಾಲಿ ಭಾರತದ ಮುಸ್ಲಿಮರು ಬಯಸಿಲ್ಲ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಿಟ್ಟ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಮುಸ್ಲಿಮರು ಇಂದು ಮೀಸಲಾತಿಯ ಪ್ರಯೋಜನ ಅಪೇಕ್ಷಿಸಿದ್ದನ್ನು ಮೋದಿಯವರು ಕೋಮು ಮನಸ್ಥಿತಿಯಿಂದ ಅಳೆದರೆ ಅದು ಅವರ ಅಜ್ಞಾನ ಮತ್ತು ಕೀಳುಮಟ್ಟದ ರಾಜಕೀಯವನ್ನು ಬಿಂಬಿಸಿದೇ ಹೊರತು ಬೇರೇನೂ ಅಲ್ಲ.
ಮೋದಿಯವರು ಮುಸ್ಲಿಮರನ್ನು ಅಧಿಕ ಮಕ್ಕಳಿರುವವರು ಎಂದು ಸಂಭೋದಿಸಿದರೆ, ಅಂತಹ ಮಕ್ಕಳನ್ನು ಈ ದೇಶದ ರಕ್ಷಣೆಗಾಗಿ ಮೀಸಲಿಡಲಿದ್ದೇವೆ. ಮೋದಿಯವರು ತಮ್ಮ ರಾಜ್ಯದಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಾತ್ಮ ಗಾಂದಿ,ವಲ್ಲಭಭಾಯಿ ಪಟೇಲ್ ಹೊರತಾದ ಇತರರ ಹೆಸರನ್ನು ಹುಡುಕುವ ಧೈರ್ಯವನ್ನಾದರೂ ಮಾಡಲಿ. ಮೋದಿಯವರು ತಮ್ಮ ನಿರ್ಗಮನ ವೇಳೆಯಲ್ಲಿಯಾದರೂ ರಾಜಧರ್ಮದ ಕಿಂಚಿತ್ ತತ್ವವನ್ನಾದರೂ ಪಾಲಿಸಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್,
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ