ಸಾಲೆತ್ತೂರು; SSF ಕಟ್ಟತ್ತಿಲ ಸೆಂಟ್ರಲ್ ಶಾಖೆಯ ಮಹ್’ಳರತುಲ್ ಬದ್ರಿಯ್ಯಾ & ಯೂನಿಟ್ ಸಮ್ಮೇಳನವು 20/10/2018 ರಂದು ಇಶಾ ನಮಾಝಿನ ಬಳಿಕ ಕಟ್ಟತ್ತಿಲ ಮಸೀದಿಯಲ್ಲಿ ಜರುಗಿತು.
ಅಸ್ಸಯ್ಯದ್ ಶಿಹಾಬ್ ತಂಙಳ್ ದುಆಗೆ ನೇತೃತ್ವ ನೀಡಿದರು.ಯೂನಿಟ್ ಸಮ್ಮೇಳನವನ್ನು ಅಲಿ ಮದನಿ ಉಸ್ತಾದರು ಸ್ವಾಗತಿದರು.ಕಟ್ಟತ್ತಿಲ ಮಸೀದಿ ಮುದರ್ರಿಸ್ ಇಬ್ರಾಹಿಂ ಪೈಝಿ ಪುಳಿಕೂರು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.ಈ ಸಮ್ಮೇಳನದ ಉದ್ಘಾಟನೆ ಹೈದರ್ ಅಶ್ರಫಿ ಇರಾ ಮೂಲೆ ನಿರ್ವಹಿಸಿದರು. ಬಹು ಅಬೂಬಕ್ಕರ್ ಸಿದ್ದೀಖ್ ಮಹ್ಮೂದಿ ವಿಲಯಿಲ್ ಕೊಂಡೊಟ್ಟಿಯವರು “ಯೌವ್ವನ ಮರೆಯಾಗುವ ಮುನ್ನ ” ವಿಷಯದಲ್ಲಿ ಅರ್ಥ ಗಾಂಭೀರ್ಯ ಭಾಷಣ ನಡೆಸಿದರು.ವೇದಿಕೆಯಲ್ಲಿ ಕೆ.ಪಿ ಅಬ್ದುಲ್ ಖಾದರ್, ಉಮರ್ ಲತೀಫಿ,ಆಬಿದ್ ನಈಮಿ, ಅಸ್ಲಂ ಪಂಜಿಕ್ಕಲ್, ಹೈದರ್ ಲತೀಫಿ ಮೆದು ಮುಂತಾದವರು ಉಪಸ್ಥಿತರಿದ್ದರು.
ವರದಿ ಶಫೀಖ್ ಕಟ್ಟತ್ತಿಲ