janadhvani

Kannada Online News Paper

ಅಲ್ ಮದೀನಾ ಅಲುಮ್ನಿ ವತಿಯಿಂದ ಪುಸ್ತಕ ಮತ್ತು ಬ್ಯಾಗ್ ವಿತರಣೆ

ಮಂಜನಾಡಿ ಅಲ್ ಮದೀನಾ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಅಲ್ ಮದೀನಾ ಅಲುಮ್ನಿ ವತಿಯಿಂದ ಸಂಸ್ಥೆಯ ಬಡ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮ ಜೂನ್ 10ರಂದು ಸಂಸ್ಥೆಯ ಸಾರಥಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಕ್ಯಾಂಪಸಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅಲ್ ಮದೀನಾ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಕಬೀರ್ ಸಅದಿ ವೇಣೂರು ಖಿರಾಅತ್ ಪಠಿಸಿದರು. ಮುಖ್ಯ ಅಥಿತಿಯಾಗಿ ಅಬ್ಬಾಸ್ ಹಾಜಿ ಪಾವೂರ್,ಹಂಝ ಝುಹ್ರಿ ಉರುಮನೆ ಭಾಗವಹಿಸಿದರು. ಅಲುಮ್ನಿ ನಾಯಕರಾದ ಝೈನುದ್ದೀನ್ ಮದನಿ,ಅಬ್ದುಲ್ ಖಾದರ್ ಝುಹ್ರಿ,ನಿಝಾರ್ ಗುರುಪುರ,ರವೂಫ್ ಜಾರಿಗೆಬೈಲ್,ಅಬ್ದುಲ್ ಖಾದರ್ ಪಾವೂರ್,ಯೂಸುಫ್ ಹನೀಫಿ ಉಳ್ಳಾಲ, ಅಬ್ದುಲ್ ಕರೀಂ ಅಡ್ಕರೆ,ಅಬ್ದುಲ್ ಅಝೀಝ್ ನೆಕ್ಕರೆ,ಹೈದರ್ ಕಲ್ಲರಕೋಡಿ ಉಪಸ್ಥಿತರಿದ್ದರು.

ಅಲ್-ಮದೀನಾ ಅಲುಮ್ನಿ ಅಧ್ಯಕ್ಷರಾದ LH ಶರೀಫ್ ಸಅದಿ ಮೂಡಬಿದ್ರೆ ಸ್ವಾಗತಿಸಿ ಪ್ರ. ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ವಂದಿಸಿದರು.

error: Content is protected !! Not allowed copy content from janadhvani.com