ಬೆಳ್ತಂಗಡಿ: ಆಗಸ್ಟ್ 11 ಅಳಕೆಯಲ್ಲಿ
SSLC ಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಡಿ.ಎಮ್ ಅಬ್ದುರ್ರಹ್ಮಾನ್ ಸಖಾಫಿ ನಾವೂರ್ ರವರ ಘನ ಅಧ್ಯಕ್ಷತೆಯಲ್ಲಿ ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಪ್ರಸ್ತುತ ಕಾರ್ಯಕ್ರಮವನ್ನು ಅಳಕೆ ಸದರ್ ಮುಅಲ್ಲಿಂರಾದ ಮುಸ್ತಫಾ ಹಿಮಮಿ ಪರಪ್ಪು ರವರು ಉದ್ಘಾಟನೆಗೈದರು.
SSLC ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಊರಿನ ಕೀರ್ತಿ ಹೆಚ್ಚಿಸಿದ ಮುಹಮ್ಮದ್ ಸುಹೈಲ್, ಶಮ್ಮಾಝ್ ಮತ್ತು ಶಮೀರ್ ಅಳಕ್ಕೆ ಯವರನ್ನು ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ವತಿಯಿಂದ ಅಭಿನಂದಿಸಲಾಯಿತು .
ಪ್ರಸ್ತುತ ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಪುಂಡಿಕ್ಕು ಆಶಂಷಾ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ
ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ,ಅಳಕೆ ಮದ್ರಸಾ ಮುಅಲ್ಲಿಂ ಅಬ್ದುರ್ರಝಾಖ್ ಮದನಿ ಬೋವು, ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ಅಧ್ಯಕ್ಷರಾದ ಗಫೂರ್ , ಪ್ರ.ಕಾರ್ಯದರ್ಶಿಗಳಾದ ಸಮೀರ್ , ಜೊತೆ ಕಾರ್ಯದರ್ಶಿಗಳಾದ ಮುಸ್ತಫಾ, ಸುಫಿಯಾನ್ ಸೌರಿ , ಸೆಕ್ಟರ್ ಎಕ್ಸಿಕ್ಯುಟಿವ್’ಗಳಾದ ಸಾಹುಲ್ ಹಮೀದ್ ಹಾಗೂ ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ಕಾರ್ಯಕರ್ತರು , SBS ವಿದ್ಯಾರ್ಥಿಗಳು ಉಪಸ್ಥಿತಿಯಿದ್ದರು.
ಪ್ರಸ್ತುತ ಕಾರ್ಯಕ್ರಮವನ್ನು ಟಿಪ್ಪು ಸುಲ್ತಾನ್ ಮುಸ್ಲಿಯಾರ್ ಸ್ವಾಗತಿಸಿ
ಸೆಕ್ಟರ್ ಎಕ್ಸ್ಕೂಟಿವ್ ನಾಸಿರ್ ಅಳಕ್ಕೆಯವರು ಧನ್ಯವಾದಗೈದರು.