ಮನಾಮ: ಕೆಸಿಎಫ್ (KCF) ಬಹರೈನ್ ನಿಂದ ಮಂಗಳೂರಿಗೆ (ಕರ್ನಾಟಕ) ಚಾರ್ಟರ್ಡ್ ವಿಮಾನ ಏರ್ಪಡಿಸುವ ತ್ವರಿತ ವ್ಯವಸ್ಥೆಗಳನ್ನು ನಡೆಸಲಾಗುತ್ತಿದೆ.
ಸಂಕಷ್ಟ ಎದುರಿಸುತ್ತಿರುವ ಅನಿವಾಸಿ ಕನ್ನಡಿಗರು, ಗರ್ಭಿಣಿಯರು, ವಯಸ್ಕರು, ತುರ್ತು ಚಿಕಿತ್ಸೆ ಅಗತ್ಯವಿರುವವರು, ಕೆಲಸ ಕಳೆದುಕೊಂಡವರು, ವೀಸಾ ಕಾಲಾವಧಿ ಮುಗಿದವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಜುಲೈ ತಿಂಗಳಿನ ಕೊನೆಯ ವಾರದಲ್ಲಿ ಮಂಗಳೂರಿಗೆ ವಿಮಾನ ಯಾನ ತೀರ್ಮಾನಿಸಿದ್ದು ಈಗಾಗಲೆ ಹೆಚ್ಚಿನ ಮಂದಿ ರೇಜಿಸ್ಟ್ ಷನ್ ಮಾಡಿಕೊಂಡಿದ್ದು, ಕೆಲವೇ ಸೀಟಿಗಳು ಮಾತ್ರ ಲಭ್ಯವಿದೆ ಎಂದು ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಮಾಲ್ ವಿಟ್ಟಲ್ ರವರು ವಾರ್ತಾ ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ.
ಸೇವೆಯ ಬಗ್ಗೆ ಟಿಕೆಟ್ ದರ ಹಾಗೂ ಸೀಟುಗಳ ಮಾಹಿತಿಗಳು ಬೇಕಾದಲ್ಲಿ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ ಯವರನ್ನು ಸಂಪರ್ಕಿಸಲು ಹಾಗೂ ಕೆಳಗಡೆ ನೀಡಿದ ಅಧಿಕೃತ ಮೊಬೈಲ್ ನಂಬ್ರಗಳಿಗೆ ಕರೆಮಾಡಿ ಪಡೆದುಕೊಳ್ಳಬಹುದು.
Registration Link:
https://forms.gle/dh8t2TAn7yBg2VRL6
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+97337700617