janadhvani

Kannada Online News Paper

ನಾಪೋಕ್ಲು – ಜೂನ್ 05 ವಿಶ್ವ ಪರಿಸರ ದಿನದ ಪ್ರಯುಕ್ತ ಎಸ್ಸೆಸ್ಸೆಫ್ ಎಮ್ಮೆಮಾಡು ಶಾಖೆ ಮುಂದಾಳುತ್ವದಲ್ಲಿ ಸಂಘಟನೆಯ ರಾಜ್ಯ ಸಮಿತಿಯ ಸುತ್ತೋಲೆಯನ್ನು ಸಮಗ್ರವಾಗಿ ಅನುಷ್ಠಾನಮಾಡಲು ಪರಿಸರ ದಿನವನ್ನು ಅದ್ಧೂರಿಯಾಗಿ ನಡೆಸಲಾಯಿತು ಆ ಪ್ರಯುಕ್ತ ಮುಸ್ಲಿಂ ಜಮಾಅತ್ ಒಕ್ಕೂಟದ ಕೊಡಗು ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್ ಕಿಲ್ಲೂಲ್ ತಂಙಳ್ ರವರ ಅಮ್ರತ ಹಸ್ತದಿಂದ ಸಸ್ಯವೊಂದನ್ನು ಖಾಸಗಿಯಾಗಿ ನಡುವುದರ ಮೂಲಕ ಉದ್ಘಾಟಿಸಿದರು.

ಎಸ್ ವೈ ಎಸ್ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ತಂಙಳ್, ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಸದಸ್ಯರುಗಳಾದ ಸಯ್ಯಿದ್ ಖಾತಿಂ ಸಖಾಫಿ ಶೌಕತ್ ಸ್ಥಳೀಯ ಶಾಖಾ ಪದಾಧಿಕಾರಿಗಳಾದ ನಝೀರ್ ಬಾಖವಿ, ನವ್ವಾರ್ ಹಾರಿಸ್ ಮುಸ್ಲಿಯಾರ್, ಝಕರಿಯಾ ಸಹದಿ ಡಿವಿಷನ್ ಸಮಿತಿ ಸದಸ್ಯರಾದ ಝಕರಿಯಾ ಜೌಹರಿ ಎಸ್ ಜೆ ಎಂ ಕೊಡಗು ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಸಖಾಫಿ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ನಾಯಕರುಗಳಾದ ಕುವೈತ್ ಪ್ರತಿನಿಧಿ ಹುಸೈನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು

error: Content is protected !! Not allowed copy content from janadhvani.com