janadhvani

Kannada Online News Paper

SYS 30ನೇ ವಾರ್ಷಿಕ ಸಮ್ಮೇಳನ ಪ್ರಚಾರ- ಕೊಡಗು ಜಿಲ್ಲಾ ಉಲಮಾ ಸಂಗಮ

ಕೊಂಡಂಗೇರಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್ ವೈ ಎಸ್)ದ 30ನೇ ವಾರ್ಷಿಕ ಮಹಾ ಸಮ್ಮೇಳನದ ಭಾಗವಾಗಿ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಡಿ.18-2023 ರಂದು ಕೊಂಡಂಗೇರಿಯಲ್ಲಿ “ಉಲಮಾ ಸಂಗಮ” ಏರ್ಪಡಿಸಲಾಯಿತು.

2024 ಜನವರಿ 24 ರಂದು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಪ್ರಚಾರಾರ್ಥ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ “ಉಲಮಾ ಸಂಗಮ”ವು ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೊಳಕೇರಿಯವರ ಅಧ್ಯಕ್ಷತೆಯಲ್ಲಿ ಕೊಂಡಂಗೇರಿಯ ಶಾದಿ ಮಹಲ್ ನಲ್ಲಿ ನಡೆಯಿತು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರ. ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದರು ಉದ್ಘಾಟನೆ ನಿರ್ವಹಿಸಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಳ್ ಸ‌ಅದಿ ಪ್ರಸ್ತಾವಿಕ ಭಾಷಣ ನಡೆಸಿದರು.ವಿ ಪಿ ಎ ದಾರಿಮಿ ತಂಙ್ಞಳ್, ಆಟೀರಿ(ಕೇರಳ) ತರಗತಿ ನಡೆಸಿದರು.
ಪೂರ್ವಾಹ್ನ 10:30ಕ್ಕೆ ಪ್ರಾರಂಭವಾದ ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಪ್ರ‌.ಕಾರ್ಯದರ್ಶಿ ಅಹ್ಮದ್ ಮುಸ್ಲಿಯಾರ್ ಸ್ವಾಗತಿಸಿ ಅಬ್ದುಲ್ ಅಝೀಝ್ ಸಖಾಫಿ ಧನ್ಯವಾದಗಳನ್ನು ಅರ್ಪಿಸಿದರು.

error: Content is protected !! Not allowed copy content from janadhvani.com