janadhvani

Kannada Online News Paper

ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ

ಜುಲೈ 24 ಶುಕ್ರವಾರದಂದು ಎಲ್ಲಾ ಯೂನಿಟ್ ಕೇಂದ್ರಗಳಲ್ಲಿ ನಾರಿಯತುಸ್ಸಲಾತ್ ಹಾಗೂ ದುಆಉಲ್ ಖರ್ಬ್ ಮಜ್ಲಿಸ್ ನಡೆಸಿ ವಿಶೇಷ ಪ್ರಾರ್ಥನೆ ಮಾಡಬೇಕೆಂದು ಎಸ್ಸೆಸ್ಸೆಫ್ ಕರೆ ನೀಡಿದೆ.

ಮಂಗಳೂರು : ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿರುವ ಅಸಂಖ್ಯಾತ ಅನಿವಾಸಿ ಮಿತ್ರರು ಆತಂಕದಲ್ಲಿದ್ದು ವ್ಯಾಪಾರ ವಹಿವಾಟುಗಳು ಕೂಡ ಗಣನೀಯವಾಗಿ ಕುಸಿದಿದೆ. ಅನಿವಾಸಿಗಳು ನಮ್ಮ ಕುಟುಂಬಗಳ ಉಸಿರಾಗಿದ್ದು, ಕುಟುಂಬದ ಭಾರ ಹೊತ್ತು ಕಡಲು ದಾಟಿ ವಿದೇಶದ ನೆಲದಲ್ಲಿ ಬೆವರು ಸುರಿಸುವವರು. ಕುಟುಂಬದ ಜೊತೆಗೆ ನಾಡಿನ ಧಾರ್ಮಿಕ ಚಟುವಟಿಕೆಗಳು ಮಸೀದಿ ಮದ್ರಸಾಗಳು , ಹತ್ತು ಹಲವು ಚಾರಿಟಿಗಳು ಹಾಗೂ ಸಂಘಸಂಸ್ಥೆಗಳ ಬೆನ್ನೆಲುಬಾಗಿ ನಿಂತಿದ್ದಾರೆ. ಆದ್ದರಿಂದಲೇ ಅವರ ಸಂಕಷ್ಟದಲ್ಲಿ ಭಾಗಿಯಾಗಿ ಅವರಿಗಾಗಿ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯಕಾರಿಣಿ ಸಭೆ ಅಭಿಪ್ರಾಯ ಪಟ್ಟಿತು.

ನಮ್ಮ ಅನಿವಾಸಿ ಮಿತ್ರರಿಗಾಗಿ ಇದೇ ಬರುವ ಜುಲೈ 24 ಶುಕ್ರವಾರದಂದು ಎಲ್ಲಾ ಯೂನಿಟ್ ಕೇಂದ್ರಗಳಲ್ಲಿ ನಾರಿಯತುಸ್ಸಲಾತ್ ಹಾಗೂ ದುಆಉಲ್ ಖರ್ಬ್ ಮಜ್ಲಿಸ್ ನಡೆಸಿ ವಿಶೇಷ ಪ್ರಾರ್ಥನೆ ಮಾಡಬೇಕೆಂದು ಎಸ್ಸೆಸ್ಸೆಫ್ ಕರೆ ನೀಡಿದೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಫಿನಾನ್ಸ್ ಕಾರ್ಯದರ್ಶಿ ಅನ್ವರ್ ಅಸ್ಸ‌ಅದಿ ಸಹಿತ ಎಸ್ಸೆಸ್ಸೆಫ್ ರಾಜ್ಯ ಕಾರ್ಯಕಾರಿಣಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಇದನ್ನೂ ಓದಿರಿ...