janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಉತ್ತರಕನ್ನಡ ಜಿಲ್ಲಾ ರಚನೆಯ ಪೂರ್ವಬಾವಿ ಸಭೆ

ಕುಮಟ: ಕರ್ನಾಟಕ ಮುಸ್ಲಿಂ ಜಮಾಅತ್ ಉತ್ತರಕನ್ನಡ ಜಿಲ್ಲಾ ಸಮಿತಿಯ ಘೋಷಣಾ ಸಮಾವೇಶದ ಪೂರ್ವಬಾವಿ ಸಭೆಯು ವರದ ಇಂಟರ್ ನ್ಯಾಷನಲ್ ಹಾಲ್ ನಲ್ಲಿ ರಾಜ್ಯ ಕಾನೂನು ಸಲಹೆಗಾರರಾದ ಅಡ್ವಕೆಟ್ ಶಾಹುಲ್ ಹಮೀದ್ ಕಾರವಾರ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ರಾಜ್ಯ ಕಾರ್ಯದರ್ಶಿ ಹಬೀಬ್ ಕೋಯ ಕಾರವಾರ ಹಾಗೂ ರಾಜ್ಯ ಸದಸ್ಯರೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮುಸ್ಲಿಂ ಜಮಾಅತ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಶಿರಸಿ ಖಾಝಿ ಮುಹಮ್ಮದ್ ಶಬೀರುಲ್ ಖಾದ್ರಿ ,ಇರ್ಫಾನ್ ಖಾಝಿ ಹೊನ್ನಾವರ ಹಾಗೂ ಮತ್ತಿತರ ಪ್ರಮುಖರು ಹಾಜರಿದ್ದರು
ಜಿಲ್ಲೆಗೋಳಪಟ್ಟ ಹನ್ನೊಂದು ತಾಲೂಕಿನಿಂದ ಆಯ್ದ ನಾಯಕರು ಬಾಗವಹಿಸಿದರು
ಸೆಯ್ಯಿದ್ ಅಲವಿ ಸಖಾಫಿ ಗಂಗಾವಳಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com