ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಎಸ್ಸೆಸ್ಸೆಫ್ ಉಪ್ಪಳ್ಳಿ ಯೂನಿಟ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಯೂನಿಟ್ ಕಛೇರಿಯಲ್ಲಿ ನಡೆಯಿತು. ಶಾಖಾಧ್ಯಕ್ಷರಾದ ಸಲ್ಮಾನ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಸಭೆಯನ್ನು ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್ ಅಧ್ಯಕ್ಷರಾದ ಫಾಝಿಲ್ ಸಅದಿ ಶಾಂತಿನಗರ ಉದ್ಘಾಟಿಸಿ ಶುಭ ಹಾರೈಸಿದರು.
ಸ್ಥಳೀಯ ಮುದರ್ರಿಸರಾದ ಮಾಚಾರು ಇಸ್ಮಾಯಿಲ್ ಸಅದಿಯವರು ಸಕಾಲಿಕ ವಿಷಯದಲ್ಲಿ ಹಿತೋಪದೇಶ ನೀಡಿದರು. ರಾಜ್ಯ ಮಾಜಿ ಸದಸ್ಯರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಯವರು ಸಂಘಟನಾ ಕಾರ್ಯಾಚರಣೆ ಬಗ್ಗೆ ಮಾತನಾಡಿದರು. ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ – ವ್ಯಯ ಲೆಕ್ಕ ಮಂಡಿಸಿದ ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಲ್ಮಾನ್ ಬಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಉವೈಸ್, ಕೋಶಾಧಿಕಾರಿ ಇರ್ಫಾನ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಸಮದ್, Q.D ಕಾರ್ಯದರ್ಶಿಯಾಗಿ ಮುನೀರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ರಶೀದ್, G.D ಕಾರ್ಯದರ್ಶಿಯಾಗಿ ಶಾನಿಫ್, ದಅ್’ವಾ ಕಾರ್ಯದರ್ಶಿಯಾಗಿ ಮುಬೀನ್, ರೈಂಬೋ ಕಾರ್ಯದರ್ಶಿಯಾಗಿ ಫಹೀಂ ಶಾ, ಮೀಡಿಯಾ ಕಾರ್ಯದರ್ಶಿಯಾಗಿ ಅಫ್ರೀದ್ ಸುಲೈಮಾನ್, ಕಾರ್ಯಕಾರಿ ಸದಸ್ಯರಾಗಿ ಸಿನಾನ್, ಅಶ್ರಫ್, ಮಶೂದ್, ಸಮೀರ್, ರಾಝಿಖ್, ಸವಾದ್, ಸಲ್ಮಾನ್, ಶಂಸುದ್ದೀನ್, ಉಮರ್, ಜುನೈದ್, ಸುಹೈಲ್,ತಬ್ರೀಝ್ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಂಸುದ್ದೀನ್ ಬದ್ರಿಯಾ, ರಾಜ್ಯ ಸದಸ್ಯರಾದ ನಿಝಾಂ ಬದ್ರಿಯಾ, ಜಿಲ್ಲಾ ನಾಯಕರಾದ ನೌಶಾದ್ ಬದ್ರಿಯಾ, ತಮೀಮ್ ಪಿ.ಜೆ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಉವೈಸ್ ಸ್ವಾಗತಿಸಿ, ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ