janadhvani

Kannada Online News Paper

ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ‌್ಯಾಲಿ ಹಾಗೂ ಕಾನ್ಫರೆನ್ಸ್

ಉಪ್ಪಿನಂಗಡಿ ಸುನ್ನೀ ಕೋ-ಆರ್ಡಿನೇಷನ್ ಸಮಿತಿ ವತಿಯಿಂದ ಇದೇ ಬರುವ 2026 ಸಪ್ಟೆಂಬರ್ 17 ಗುರುವಾರ ಸಂಜೆ 4 ಗಂಟೆಗೆ ಸರಿಯಾಗಿ ಉಪ್ಪಿನಂಗಡಿ HM ಹಾಲ್ ಮೈದಾನದಲ್ಲಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಮೀಲಾದ್ ರ‌್ಯಾಲಿ ನಡೆಯಲಿದೆ.

ರ‌್ಯಾಲಿಯಲ್ಲಿ ಸಮವಸ್ತ್ರದಾರಿಗಳಾದ ಸೇವಾತಂಡ ಸೇರಿದಂತೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬಳಿಕ ವೇದಿಕೆಯಲ್ಲಿ ಮೌಲಿದ್ ಮಜ್ಲಿಸ್‌ಗೆ ಸಯ್ಯಿದ್ ಹಂಝ ತಂಙಳ್ ಕರ್ಪಾಡಿ ನೇತೃತ್ವ ನೀಡಲಿದ್ದು ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ವಳವೂರು ಮುಹಮ್ಮದ್ ಸಹದಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕಾಸಿಂ ಮದನಿ ಉಸ್ತಾದ್ ಕರಾಯ ಉದ್ಘಾಟನೆ ಮಾಡಲಿದ್ದಾರೆ.

ಚಿಂತಕ ಹಾಗೂ ಖ್ಯಾತ ವಾಗ್ಮಿ ಸುಲೈಮಾನ್ ಸಖಾಫಿ ಮಾಲಿಯೇಕಳ್ ಕೇರಳ ಮುಖ್ಯ ಭಾಷಣ ಹಾಗೂ ಹೈದರ್ ಮದನಿ ಉಸ್ತಾದ್ ಕರಾಯ ಹಿತವಚನ ಮಾಡಲಿದ್ದಾರೆ. ಸಯ್ಯಿದ್ ಶಹೀರ್ ತಂಙಳ್ ಪೋಸೋಟ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು ಉಪ್ಪಿನಂಗಡಿ ವ್ಯಾಪ್ತಿಯ ಹಲವು ಕಡೆಗಳಿಂದ ಸಾವಿರಾರು ಜನ ಸೇರುವ ಮೀಲಾದ್ ಕಾನ್ಫರೆನ್ಸ್ ಐತಿಹಾಸಿಕಗೊಳಿಸಲು ಈಗಾಗಲೇ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.

ಅಹ್ಲುಸ್ಸುನ್ನದ ಪರಂಪರಾಗತ ಆಶಯಗಳನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಹಲವಾರು ಪ್ರಮುಖ ವಿದ್ದಾಂಸರು ಹಾಗೂ ಧಾರ್ಮಿಕ ಶೈಕ್ಷಣಿಕ ಮುಂದಾಳುಗಳು ವಿಶಿಷ್ಟ ಅತಿಥಿಗಳಾಗಿ ಭಾಗವಹಿಸಲಿದ್ದು, SJU, SJM SMA, KMJ, SYS, SSF, ಹಾಗೂ KCF ಸಹಭಾಗಿತ್ವ ದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕೋ-ಆರ್ಡಿನೆಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪ್ರಕಟಣೆಯಲ್ಲಿ ತಿಳಿಸುತ್ತಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೇರ್ಮಾನ್ ಅಬ್ದುಲ್ ಶುಕೂರು ಮೇದರಬೆಟ್ಟು, ಕನ್ವೀನರ್ ಅಬ್ಬಾಸ್ ಮದನಿ ಬಂಡಾಡಿ, ಕೋ-ಆರ್ಡಿನೇಷನ್ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಬಟ್ಲಡ್ಕ, ಫೈನಾನ್ಸಿಯಲ್ ಕಾರ್ಯದರ್ಶಿ ಅಶ್ರಫ್ ನೀರಕಟ್ಟೆ ಉಪಸ್ಥಿತರಿದ್ದರು.

ಇದನ್ನೂ ಓದಿರಿ...