janadhvani

Kannada Online News Paper

ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್,ಎಸ್ಸೆಸ್ಸೆಫ್ ಗೂಡಿನಬಳಿ ಘಟಕದ ವತಿಯಿಂದ ಸರಕಾರಿ ಕಾಲೇಜು ಸಮೀಪ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಗೂಡಿನಬಳಿ ಘಟಕದ ಅಧ್ಯಕ್ಷ ಅಲೀಂ SB ವಹಿಸಿದ್ದರು. ಗೂಡಿನಬಳಿ ವೆಲ್ಫೇರ್ ಅಸೋಸಿಯೇಷನ್ ಕೋಶಾಧಿಕಾರಿ ಜಿ.ಕೆ ಹನೀಫ್ ಹಾಜಿ ಧ್ವಜಾರೋಹಣ ನೆರವೇರಿಸಿದರು, ಇರ್ಷಾದ್ ಹಾಜಿ ಗೂಡಿನಬಳಿ ಪ್ರತಿಜ್ಞಾವಿಧಿ ಮತ್ತು ಸಂದೇಶ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಮಸ್ಜಿದ್ ಏ ಮುತ್ತಲಿಬ್ ಗೂಡಿನಬಳಿ ಉಪಾಧ್ಯಕ್ಷ ಮನ್ಸೂರ್ GK ಸದಸ್ಯರಾದ ಮುಬಾರಕ್ ಟಿ, ಹಸನಬ್ಬ, ರಝಕ್ ಟಿ ಸುಲೈಮಾನ್ ಹಯತುಲ್ ಇಸ್ಲಾಂ ಮದ್ರಸ ಮಾಜಿ ಸಂಚಾಲಕ ಇಬ್ರಾಹಿಂ ಹಾಜಿ ಹಯತುಲ್ ಇಸ್ಲಾಂ ಸಂಘದ ಸದಸ್ಯ ಅಕ್ಬರ್ ಎಮ್ ಕೆ, ಎಸ್ಸೆಸ್ಸೆಫ್ ಉಪಾಧ್ಯಕ್ಷ ಶಫೀಕ್, ಸದಸ್ಯರಾದ ಸ್ವಾದಿಕ್, ಮುಸ್ಲಿಂ ಜಮಾತ್ ನಾಯಕರಾದ ರಝಕ್ ಹಾಜಿ ಜಬಲುನ್ನೂರ್ ಗೂಡಿನಬಳಿ ವೆಲ್ಫೇರ್ ಉಪಾಧ್ಯಕ್ಷರಾದ ಅಝೀಝ್ ಪ್ರಧಾನ ಕಾರ್ಯದರ್ಶಿ ಅಥವುಲ್ಲಾ GK ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿರಿ...