janadhvani

Kannada Online News Paper

ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ,ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಗ್ರಾಂಡ್ ಮೌಲಿದ್ ಮಜ್ಲಿಸ್ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮವು ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 12 ಬುದವಾರ ಸಂಜೆ 3:00 ಗಂಟೆಗೆ ಎಸ್ ಕೆ ಮಲ್ಟಿ ಪರ್ಪಸ್ ಹಾಲ್ ನಂದರಪಡ್ಪು,ಮುಡಿಪುವಿನಲ್ಲಿ ನಡೆಯಲಿರುವುದು.

ಕರ್ನಾಟಕ ರಾಜ್ಯ ಹಜ್ ಸಲಹಾ ಸಮಿತಿ ಸದಸ್ಯರಾದ ಸಯ್ಯಿದ್ ಅಶ್ರಫ್ ತಂಙಳ್ ಆದೂರು ದುಆ ನಡೆಸಲಿರುವರು.

ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯಾದರ್ಶಿ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು

ಎಸ್.ವೈ.ಎಸ್ ಕೇರಳ ರಾಜ್ಯ ಕಾರ್ಯದರ್ಶಿಗಳಾದ ಡಾ ಮುಹಮ್ಮದ್ ಫಾರೂಕ್ ನ ಈಮೀ ಅಲ್ ಬುಖಾರಿ ಕೊಲ್ಲಂ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ,ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ,ಸಯ್ಯಿದ್ ಮುಷ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಜಲ್, ಸಯ್ಯಿದ್ ಅಮೀರ್ ಅಸ್ಸಖಾಫ್ ತಂಙಳ್ ಅಮ್ಮೆಂಬಳ,ಸಯ್ಯಿದ್ ಜಲಾಲುದ್ದೀನ್ ಜಮಲುಲ್ಲೈಲಿ ತಂಙಳ್ ಪಾತೂರು,ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್ ನಗರ, ಸಯ್ಯಿದ್ ಮುಹಮ್ಮದ್ ಶರಫುದ್ದೀನ್ ಅಲ್ ಹೈದ್ರೋಸ್ ತಂಙಳ್ ನಡಿಬೈಲ್ , ಸಯ್ಯಿದ್ ಶಹೀರ್ ಅಲ್ ಹಾದಿ ತಂಙಳ್ ಸುಣ್ಣಂಗಳ,ಸಯ್ಯಿದ್ ಫತ್ಹುದ್ದೀನ್ ತಂಙಳ್ ಲೆಕ್ಕಸಿರಿ,ಸಯ್ಯಿದ್ ಸಿ ಟಿ ಎಂ ತಂಙಳ್ ಮುಡಿಪು, ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ನಾಯಕರಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ,ವಕ್ಫ್ ಕೌನ್ಸಿಲ್ ಚಯರ್ ಮ್ಯಾನ್ ಶಾಫಿ ಸಅದಿ ಬೆಂಗಳೂರು, ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು,ಅಬ್ದುಲ್ ಖಾದರ್ ಸಖಾಫಿ ಅಲ್- ಮದೀನಾ, ಎಸ್ ವೈ ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಬಶೀರ್ ಸ ಅದಿ ಬೆಂಗಳೂರು,ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ,ಕೋಶಾಧಿಕಾರಿ ಮನ್ಸೂರು ಅಲಿ ಕೋಟಗದ್ದೆ,ಜಿಲ್ಲಾ ಉಸ್ತುವಾರಿ ಹಸೈನಾರ್ ಆನೆಮಹಲ್,ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ,ಎಸ್ ಜೆ ಎಂ ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಜೆಪ್ಪು,ಎಸ್ ಎಂ ಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ,ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ,ಮುಹಮ್ಮದ್ ಅಲಿ ಫೈಝಿ ಬಾಳೆಪುಣಿ,ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಉಸ್ಮಾನ್ ಸ ಅದಿ ಪಟ್ಟೋರಿ,ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯಾ,ಎಸ್ ಕೆ ಮಲ್ಟಿ ಪರ್ಪಸ್ ಹಾಲ್ ಮಾಲಕರಾದ ಎಸ್ ಕೆ ಅಬ್ದುಲ್ ಖಾದರ್ ಹಾಜಿ ಸಂಬಾರತೋಟ ಮೊದಲಾದ ಧಾರ್ಮಿಕ , ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...