janadhvani

Kannada Online News Paper

ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ

ಮಂಗಳೂರು: ಉಳ್ಳಾಲ ಕೇಂದ್ರೀಕರಿಸಿ ದಕ್ಷಿಣ ಕರ್ನಾಟಕ ಮತ್ತು ಕೇರಳದಲ್ಲಿ ಆರು ದಶಕಕ್ಕೂ ಹೆಚ್ಚು ಕಾಲದಿಂದ ಧಾರ್ಮಿಕ ಮತ್ತು ಶೈಕ್ಷಣಿಕ ಜಾಗೃತಿ ಮೂಡಿಸುತ್ತಾ ಸೇವಾ ನಿರತರಾಗಿದ್ದ ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿಯವರು ಕೀರ್ತಿಶೇಷರಾಗಿ ಹದಿಮೂರು ವರ್ಷಗಳು ಸಂದ ಸಂದರ್ಭದಲ್ಲಿ ಹದಿಮೂರನೇ ಉರೂಸ್ ನಡೆಯುತ್ತಿದ್ದು, ಇದರ ಯಶಸ್ಸಿಗೆ ಸರ್ವ ಸುನ್ನೀ ಕಾರ್ಯಕರ್ತರು ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಕರೆ ನೀಡಿದೆ.

ಕರ್ನಾಟಕದಲ್ಲಿ ಸುನ್ನೀ ಸಂಘಟನೆಗಳನ್ನು ಸಕ್ರಿಯಗೊಳಿಸುವುದರಲ್ಲಿ ತಾಜುಲ್ ಉಲಮಾರ ನಾಯಕತ್ವಕ್ಕೆ ಅಪಾರ ಪಾತ್ರವಿದ್ದು, ಅವರನ್ನು ಸದಾ ಸ್ಮರಿಸುವ ಮತ್ತು ಅವರ ಹಾದಿಯನ್ನು ಅನುಸರಿಸುವ ಕರ್ತವ್ಯ ಸಮುದಾಯಕ್ಕಿದೆ. ಸೆಪ್ಟೆಂಬರ್ 13 ರ ತನಕ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಕರೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಸಯ್ಯಿದ್ ಶಾಫಿ ನಈಮಿ ತಂಙಳ್ ಹಾಸನ, ಅಬ್ದುರ್ರಹ್ಮಾನ್ ರಝ್ವಿ ಉಡುಪಿ, ಕೋಶಾಧಿಕಾರಿ ಮನ್ಸೂರ್ ಅಲಿ ಶಿವಮೊಗ್ಗ, ಕಾರ್ಯದರ್ಶಿಗಳಾದ ಅಹ್ಮದ್ ಮದನಿ ವಿರಾಜಪೇಟೆ, ಅಶ್ಅರಿಯಾ ಸಖಾಫಿ ಸುರಿಬೈಲ್, ಹಸೈನಾರ್ ಆನೆಮಹಲ್, ಆಸಿಫ್ ಕೃಷ್ಣಾಪುರ ಉಪಸ್ಥಿತರಿದ್ದರು. ಕೆ ಎಂ ಅಬೂಬಕರ್ ಸಿದ್ದೀಖ್ ಸ್ವಾಗತಿಸಿ ಖಲೀಲ್ ಮಾಲಿಕಿ ಧನ್ಯವಾದವಿತ್ತರು.

ಇದನ್ನೂ ಓದಿರಿ...