janadhvani

Kannada Online News Paper

ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಸನ್ಮಾನ- ನಾರ್ಶ ಉಸ್ತಾದರಿಗೆ ತಾಜುಲ್ ಉಲಮಾ ಅವಾರ್ಡ್

ಕಲ್ಲಡ್ಕ: ನಾರಂಕೋಡಿ ತಾಜುಲ್ ಉಲಮಾ ಮದ್ರಸ ಇದರ ವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಹಾಗೂ ಸನ್ಮಾನ ಕಾರ್ಯಕ್ರಮವು ಫೆ. 9 ರಂದು ತಾಜುಲ್ ಉಲಮಾ ಮದ್ರಸ ವಠಾರ ನಾರಂಕೋಡಿಯಲ್ಲಿ ನಡೆಯಿತು.

ಸಂಜೆ 4.30 ಕ್ಕೆ – ಅಬ್ಬಾಸ್ ಮುಸ್ಲಿಯಾರ್ ಬೋಳಂತೂರು ಇವರ ನೇತೃತ್ವದಲ್ಲಿ ಮರ್ಹೂಂ ಶೈಖುನಾ ಸುರಿಬೈಲ್ ಉಸ್ತಾದ್ ರವರ ಮಖ್ ಬರ ಝಿಯಾರತ್ ನಡೆಯಿತು.
ಸಂಜೆ 5 ಕ್ಕೆ- ಸುಲೈಮಾನ್ ಸಖಾಫಿ, ಖತೀಬರು ಬೋಳಂತೂರು ಇವರ ನೇತೃತ್ವದಲ್ಲಿ ತಾಜುಲ್ ಉಲಮಾ ಮೌಲಿದ್ ಮಜ್ಲಿಸ್ ನಡೆಸಲಾಯಿತು.
ನೌಫಲ್ ಹನೀಫಿ ಅಶ್ ಅರಿಯ್ಯ ಮೌಲಿದ್ ಆಲಾಪನೆಗೈದರು. ಸಂಜೆ 7.00ಕ್ಕೆ ಹಮೀದ್ ಮದನಿ, ನಾರ್ಶ ಇವರ ನೇತೃತ್ವದಲ್ಲಿ ಬದ್ರಿಯತ್ ಮಜ್ಲಿಸ್ ನಡೆಸಲಾಯಿತು.

ರಾತ್ರಿ ಗಂಟೆ 8 ಕ್ಕೆ ನೂರುಸ್ಸಾದತ್ ಬಾಯಾರ್ ತಂಙಳ್ ನೇತೃತ್ವದಲ್ಲಿ ಅನುಸ್ಮರಣಾ ಸಮ್ಮೇಳನ ನಡೆಸಲಾಯಿತು. ಅಬ್ದುಲ್ಲಾ ನಾರಂಕೋಡಿಯವರು ಅಧ್ಯಕ್ಷತೆ ವಹಿಸಿದರು. ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಉದ್ಘಾಟಿಸಿದರು. ನೌಫಲ್ ಸಖಾಫಿ ಕಳಸ, ಮುಖ್ಯ ಪ್ರಭಾಷಣಗೈದರು. ಎಣ್ಮೂರ್ ಉಸ್ತಾದ್ ಮತ್ತು ಸಿ.ಹೆಚ್ ಮುಹಮ್ಮದಲಿ ಸಖಾಫಿ ಪ್ರಾಸ್ತವಿಕ ಭಾಷಣ ಮಾಡಿದರು.

ಮದ್ರಸ ರಂಗದಲ್ಲಿ ಸುಮಾರು 51 ವರ್ಷ ಸೇವೆ ಸಲ್ಲಿಸಿದ ಅಲ್ ಹಾಜಿ ಎಸ್.ಎ ಸುಲೈಮಾನ್ ಉಸ್ತಾದ್ ನಾರ್ಶ ಅವರಿಗೆ ತಾಜುಲ್ ಉಲಮಾ ಅವಾರ್ಡ್ ನೀಡಿ ಹಾಗೂ ದಾರುಲ್ ಅಶ್ ಅರಿಯ್ಯ ವಿದ್ಯಾ ಸಂಸ್ಥೆಯ ಮೆನೇಜರ್ ಆಗಿ 22 ವರ್ಷಗಳಿಂದ ಸೇವೆಸಲ್ಲಿಸಿದ ಮುಹಮ್ಮದ್ ಅಲಿ ಸಖಾಫಿ ಉಸ್ತಾದ್ ರವರಿಗೆ ತಾಜುಲ್ ಫುಖಹಾ ದಅ್ ವಾ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.
ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್ ಹಾಗೂ ತಾಜುಲ್ ಉಲಮಾ ಮದ್ರಸದ ಹಿರಿಯ ಸದಸ್ಯರಾದ ಇಬ್ರಾಹೀಂ ನಾರಂಕೋಡಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ :- ಕೆ.ಎಸ್ ಆಸ್ಪತ್ರೆ ಕೊಪ್ಪ ಮೆನೇಜರ್ ಆಗಿರುವ ಶಾಕೀರ್ ಬಡಕಬೈಲ್, ಕಾಂಗ್ರೆಸ್ ಅಸಂಘಟಿತರ ಕಾರ್ಮಿಕ ಘಟಕ ಅಧ್ಯಕ್ಷರಾದ ಅಬ್ಬಾಸ್ ಅಲಿ ಬೋಳಂತೂರು, ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿಯ ಕಾರ್ಯದರ್ಶಿ ಮುಸ್ತಖ್ ಬೇಗ್, ಅಕ್ಬರ್ ಅಲಿ ಮದನಿ ಮಂಚಿಬೈಲ್, ಸುನ್ನಿ ಮಹಲ್ ಕಾರ್ಯದರ್ಶಿ ರಝಾಕ್ ಭಾರತ್ ಎಸ್. ಜೆ.ಎಂ. ಬೋಳಂತೂರು ರೇಂಜ್ ಅಧ್ಯಕ್ಷರಾದ ಮೆಹ್ಮೂದ್ ಸಅದಿ ಬಾರೆಬೆಟ್ಟು, ಎಸ್.ಎಂ. ಎ ಬೋಳಂತೂರು ರೀಜನಲ್ ಅಧ್ಯಕ್ಷರಾದ ಮುತ್ತಲಿಬ್ ಹಾಜಿ ನಾರ್ಶ, ಎಸ್.ಎಂ. ಎ ಬೋಳಂತೂರು ರೀಜನಲ್ ಕಾರ್ಯದರ್ಶಿ ರಝಾಕ್ ಅಮ್ಜಾದಿ, ಎಸ್ ವೈ. ಎಸ್ ಬೋಳಂತೂರು ಸರ್ಕಲ್ ಅಧ್ಯಕ್ಷರಾದ ಶರೀಫ್ ಸಅದಿ, ಎಸ್ ವೈ. ಎಸ್ ಬೋಳಂತೂರು ಸರ್ಕಲ್ ಕಾರ್ಯದರ್ಶಿ ಅಶ್ರಫ್ ನಾರ್ಶ, ಬೋಳಂತೂರು ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹೀಂ ಮಜಲುಕೋಡಿ, ಬೋಳಂತೂರು ರಹ್ಮಾನಿಯಾ ಜುಮಾ ಮಸೀದಿಯ ಕಾರ್ಯದರ್ಶಿ ರಫೀಕ್ ಮಾಡದಬಳಿ, ಎಸ್ ವೈ. ಎಸ್ ಬೋಳಂತೂರು ಸರ್ಕಲ್ ಸ್ವಾಂತಾನ ಕಾರ್ಯದರ್ಶಿ ಝಕರಿಯಾ ನಾರ್ಶ, ಎಸ್ ವೈ. ಎಸ್ ಬೋಳಂತೂರು ಸರ್ಕಲ್ ನಾಯಕರಾದ ದಾವೂದ್ ಕಲ್ಲಡ್ಕ, ತಾಳಿತ್ತನೂಜಿ ಜುಮಾ ಮಸೀದಿಯ ಅಧ್ಯಕ್ಷರಾದ ಯೂಸುಫ್ ತಾಳಿತ್ತನೂಜಿ, ಎಸ್ ವೈ.ಎಸ್ ಮಂಚಿ ಸರ್ಕಲ್ ಸ್ವಾಂತಾನ ಕಾರ್ಯದರ್ಶಿ ಹಂಝ ಮಂಚಿ, ಸುನ್ನಿ ಮಹಲ್ ಜಿಸ್ತಿ ಕಮಿಟಿ ಸದಸ್ಯರಾದ ಝುಬೈರ್ ಸಂಪಿಲ, ಬೋಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಅನ್ಸಾರ್ ಬಿ.ಜಿ. , ಎಸ್ ವೈ.ಎಸ್ ಸುರಿಬೈಲ್ ಯುನಿಟ್ ಅಧ್ಯಕ್ಷರಾದ ಸಲಾಂ ಮದನಿ, ಬೋಳಂತೂರು ಸರ್ಕಲ್ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಇಬ್ರಾಹೀಂ ನಾರ್ಶ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಸಿ.ಹೆಚ್ ರಝಾಕ್, ಎಸ್ ವೈ. ಎಸ್ ಸುರಿಬೈಲ್ ಸರ್ಕಲ್ ಸದಸ್ಯರಾದ ಅಶ್ರಫ್ ಸೆರ್ಕಳ, ಎಸ್ ವೈ.ಎಸ್ ಸುರಿಬೈಲ್ ಸರ್ಕಲ್ ಕಾರ್ಯದರ್ಶಿ ಹೈದರಾಲಿ ಕೆ.ಪಿ. ಬೈಲ್, ಹಯಾತುಲ್ ಇಸ್ಲಾಂ ನಾರ್ಶ ಸದರ್ ಮುಅಲ್ಲಿಮ್ ಅಬ್ದುಲ್ ಖಾದರ್ ಮುಸ್ಲಿಯಾರ್, ರಹ್ಮಾನಿಯಾ ಜುಮಾ ಮಸೀದಿ ನಾರ್ಶ ಮಅಝ್ಝಿಮ್ ಫಾರೂಕ್ ಝುಹರಿ, ತಾಜುಲ್ ಉಲಮಾ ಸುನ್ನಿ ಸೆಂಟರ್ ಎನ್. ಸಿ ರೋಡ್ ಕೋಶಾಧಿಕಾರಿ ಶರೀಫ್ ಕೆ. ಯನ್ ಹಾಗೂ ಸ್ವಾಗತ ಸಮಿತಿಯ ಚಯರ್ ಮ್ಯಾನ್ ಫಾರೂಕ್ ಬಿ ಜಿ. ಇವರು ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯದರ್ಶಿ ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು. ನೌಫಲ್ ಕೆ.ಬಿ.ಯಸ್ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com