janadhvani

Kannada Online News Paper

ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ 2025 -2026 ನೇ ಸಾಲಿನ ಸಮಿತಿಗೆ ಚುನಾವಣೆ ಪ್ರಕ್ರಿಯೆ ನಡೆಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಸುಹೈಲ್ ರಹ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಶಾಮಿಲ್ , ಕೋಶಾಧಿಕಾರಿಯಾಗಿ J.M ನಸೀಬ್ ಆಯ್ಕೆಯಾದರು. ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ರಿಹಾಂ, ಮುಹಮ್ಮದ್ ಅಶ್ವನ್, ಮುಹಮ್ಮದ್ ಹಾಶಿಮ್, ಕಾರ್ಯದರ್ಶಿಗಳಾಗಿ ಮುಹಮ್ಮದ್ ಝಾಹೀರ್, ಅಹ್ಮದ್ ಅರ್ಫಾಕ್, ಮುಹಮ್ಮದ್ ಸೈಫುಲ್ಲಾ, ಗ್ರೂಪ್ ಲೀಡರ್ ಗಳಾಗಿ ಮುಈನುದ್ದೀನ್ ಮಹ್ರೂಫ್, ಮುಹಮ್ಮದ್ ಸಜ್ಜಾದ್ , ಮುಹಮ್ಮದ್ ಸಹದ್, ಮುಹಮ್ಮದ್ ಫರಾಝ್.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಸಾಕಿಬ್ , ಮುಹಮ್ಮದ್ ಅಫ್ಲಲ್, ಮುಹಮ್ಮದ್ ಶಹದ್ , ಮುಹಮ್ಮದ್
ಅಬ್ ಝರ್ , ಮುಹಮ್ಮದ್ ಝಾಕಿರ್, ಮುಹಮ್ಮದ್ ಅರಫಾ ಇವರನ್ನು ಆಯ್ಕೆ ಮಾಡಲಾಯಿತು..
ಸಭೆಯ ಆರಂಭದಲ್ಲಿ ಮದ್ರಸ ಪ್ರಾಂಶುಪಾಲರಾದ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಶಾಮಿಲ್ ಧನ್ಯವಾದಗೈದರು.