janadhvani

Kannada Online News Paper

ನವೆಂಬರ್ 11 ರಂದು ಕನ್ಯಾನ, ಗೋಳಿಕಟ್ಟೆಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ

ಕನ್ಯಾನ: SჄS ಗೋಳಿಕಟ್ಟೆ ಬ್ರಾಂಚ್ ಹಾಗೂ SSF ಗೋಳಿಕಟ್ಟೆ ಶಾಖೆ ತಾಜುಲ್ ಉಲಮಾ‌ ( ಖ.ಸಿ) ಅನುಸ್ಮರಣೆ ಹಾಗೂ ಮಾಸಿಕ‌ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ 2022 ನವಂಬರ್ 11 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಸುಲೈಮಾನ್ ಪಾಲ್ತೋಡಿ ಮನೆಯಲ್ಲಿ ನಡೆಯಲಿದೆ.

ಅಬ್ದುಲ್ ಕಾದರ್ ಸಅದಿ, ಅದ್ಯಕ್ಷರು SჄS ಗೋಳಿಕಟ್ಟೆ ಬ್ರಾಂಚ್ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ. ಕೆ.ಎಂ ಅಶ್ರಫ್ ಸಖಾಫಿ ಕನ್ಯಾನ ಸ್ವಾಗತ ಹಾಗೂ MIM ಅಶ್ರಫ್ ಸಖಾಫಿ ಮಂಡ್ಯೂರು ಉದ್ಘಾಟನೆ ಯ ನಂತರ ಕಬೀಬ್ ಹಿಮಮಿ ಸಖಾಫಿ ಗೋಳಿಯಡ್ಕ ಮುಖ್ಯ ಭಾಷಣ ಮಾಡಲಿದ್ದಾರೆ.

ವೇದಿಕೆಯಲ್ಲಿ ಸಿರಾಜುದ್ದೀನ್ ಸಖಾಫಿ, ಅಝೀಝ್ ಮದನಿ ಗೋಳಿಕಟ್ಟೆ , ಸುಲೈಮಾನ್ ಸಖಾಫಿ ಅದ್ಯಕ್ಷರು SჄS ಕನ್ಯಾನ ಸೆಂಟರ್ , ಮಹಮ್ಮದ್ ಹಾಜಿ ಪರಕ್ಕಜೆ ಚೇರ್ಮನ್ ಸುನ್ನಿ ಸೆಂಟರ್ ನಿರ್ಮಾಣ ಸಮಿತಿ ಕನ್ಯಾನ, ಮಹಮ್ಮದ್ ಮಡಕುಂಜ ಕಾರ್ಯದರ್ಶಿ SჄS ಗೋಳಿಕಟ್ಟೆ ಬ್ರಾಂಚ್ ಮುನೀರ್ ಗೋಳಿಕಟ್ಟೆ ಅದ್ಯಕ್ಷರು SSF ಗೋಳಿಕಟ್ಟೆ ಶಾಖೆ ಶಬೀರ್ ಅದ್ಯಕ್ಷರು SSF ಕನ್ಯಾನ ಸೆಕ್ಟರ್ ಅಶ್ರಫ್ ಮದನಿ ಚೆಂಬರ್ಪು ಅಬ್ದುಲ್ ಕಾದರ್ ಮುಸ್ಲಿಯಾರ್ ಕೇಪುಗಳಗುಡ್ಡೆ ಮುಂತಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರದಿ : ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ಕನ್ಯಾನ

error: Content is protected !! Not allowed copy content from janadhvani.com