ಜಿದ್ದಾ:- ಡಿಕೆಯಸ್ಸಿ ಮಕ್ಕಾ ವಲಯ ಸಮಿತಿ ಮಹಾಸಭೆಯು 19/06/2026 ಶುಕ್ರವಾರ ಜುಮ್ಅ ನಮಾಝ್ ಬಳಿಕ ವಲಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸೈಯದ್ ನಾಫೀ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜಿದ್ದಾ ಮಹಾಜರ್ ನಲ್ಲಿ ನೆರವೇರಿತು. ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ರವರನ್ನು ಆಯ್ಕೆ ಮಾಡಲಾಯಿತು.

ಬಹು॥ ಸಯ್ಯಿದ್ ನಾಫೀ ತಂಙಳ್ ರವರ ದುಆಃ ದೊಂದಿಗೆ ಪ್ರಾರಂಭ ಗೊಂಡ ಸಭೆಯ ಉದ್ಘಾಟನೆಯನ್ನು ಕೇಂದ್ರ ಸಮಿತಿಯ ಆರ್ಗನೈಝರ್ ಉಸ್ತಾದ್ ಬಹು॥ ಅಬ್ದುರ್ರಶೀದ್ ಸಅದಿ ನೆರವೇರಿಸಿದರು . ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಮಜೀದ್ ಕಣ್ಣಂಗಾರ್, ಮಕ್ಕಾ ವಲಯದ ಉಸ್ತುವಾರಿ ಜನಾಬ್ ಹಸನ್ ಬಾವ ಕುಪ್ಪೆಪದವು ಹಾಗೂ ಕೇಂದ್ರ ಹಿರಿಯ ನಾಯಕರಾದ ಜನಾಬ್ ಅಬೂಬಕರ್ ಅಜಿಲಮೊಗರು ಭಾಗವಹಿಸಿ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಹಿತವಚನವನ್ನು ನೀಡಿದರು.
ಚುನಾವಣಾ ಅಧಿಕಾರಿಯಾಗಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಮಜೀದ್ ಕಣ್ಣಂಗಾರ್ ಕಾರ್ಯನಿರ್ವಹಿಸಿದರು. ವಲಯದ ಹಿರಿಯ ನೇತಾರರು ಆದ ಜನಾಬ್ ಇಸ್ಮಾಯಿಲ್ ಹೈದ್ರೋಸ್ ಮೂಡಿಗೆರೆ ರವರು ತಮ್ಮ ಸ್ವಾಗತ ಭಾಷಣದಲ್ಲಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಇತ್ತೀಚೆಗೆ ನಡೆದ ಗಲ್ಫ್ ಮೀಟ್ ನಲ್ಲಿ ಭಾಗವಹಿಸಿದ ಬಗ್ಗೆ ತಮ್ಮ ಅನುಭವ ವನ್ನು ಸಭೆಯಲ್ಲಿ ಬಹಳ ಉತ್ತಮವಾಗಿ ವಿವರಿಸಿದರು. ಜಿದ್ದಾ ನಾರ್ತ್ ಯುನಿಟ್ ಅಧ್ಯಕ್ಷ ಜನಾಬ್ ಹಾರೂನ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಸನ್ ಜಿದ್ದಾ ಖಿರಾಅತ್ ಪಠಿಸಿದರು ಜನಾಬ್ ಇಬ್ರಾಹಿಂ ಕಣ್ಣಂಗಾರ್ ಧನ್ಯವಾದ ಗೈದರು ವಲಯದ ಪ್ರಧಾನ ಕಾರ್ಯದರ್ಶಿ ಜನಾಬ್ ರಫೀಖ್ ಎರ್ಮಾಲ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಕಾರ್ಯಕಾರಿ ಸಮಿತಿ 2026-27
ಅಧ್ಯಕ್ಷ:
ಮುಹಮ್ಮದ್ ಶರೀಫ್ ಮರವೂರು
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಫಝಲ್ ಸೂರಿಂಜೆ
ಹಣಕಾಸು ಕಾರ್ಯದರ್ಶಿ: ಮುಹಮ್ಮದ್ ಇಖ್ಬಾಲ್ ಅರಳ
ಸಂವಹನ ಕಾರ್ಯದರ್ಶಿ:
ಇಬ್ರಾಹೀಂ ಕಣ್ಣಂಗಾರ್
ಡೆವಲಪ್ಮೆಂಟ್ ಚೇರ್ಮನ್:
ಸೈಯದ್ ಮುಹಮ್ಮದ್ ತಂಙಳ್ ಉಚ್ಚಿಲ.
ಉಪಾಧ್ಯಕ್ಷರು:
1. ಸೈಯದ್ ನಾಫೀ ತಂಙಳ್
2. ಮುಹಮ್ಮದ್ ಮೋನು ದೊಂಪ ತಬೂಕ್
3. ಮುಹಮ್ಮದ್ ಇಕ್ಬಾಲ್ ಕೃಷ್ಣಾಪುರ (Al Falah)
ಕಾರ್ಯದರ್ಶಿ:
1. ಹೈದರ್ ಮೂಡಿಗೆರೆ
2. ಹಾರೂನ್ ಬಂಟ್ವಾಳ
ಮುಖ್ಯ ಸಲಹೆಗಾರರು :
ಬಹು॥ ಉಮರುಲ್ ಫಾರೂಖ್ ಸಅದಿ ಎಚ್ ಕಲ್ಲು
ಸಲಹೆಗಾರರು:
1. ಅಝರ್ ಕೃಷ್ಣಾಪುರ
2. ರಫೀಖ್ ಎರ್ಮಾಳ್
ಲೆಕ್ಕ ಪರಿಶೋಧಕ:
ಇಸ್ಮಾಯೀಲ್ ಹೈದ್ರೋಸ್ ಮೂಡಿಗೆರೆ
ಮೀಡಿಯಾ: ಆಸಿಫ್ ಕೋಟ
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ