janadhvani

Kannada Online News Paper

ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ

ಕುಂಬ್ರದ ಮಣ್ಣಿನಲ್ಲಿ ಮುಳಕೆಯೊಡೆದು, ಜನರ ಪ್ರೀತಿ-ವಿಶ್ವಾಸವನ್ನು ಸಂಪಾದಿಸಿಕೊಂಡು ಯಶಸ್ವಿಯಾಗಿ ಹತ್ತನೇ ವರ್ಷದ ಸಂಭ್ರಮದಲ್ಲಿರುವ ಇಂಡಿಯನ್ ಇವೆಂಟ್ ಆ್ಯಂಡ್ ವೆಡ್ಡಿಂಗ್ಸ್ ಶಾಮಿಯಾನ ಸಂಸ್ಥೆಯ ಗೋಡೌನ್‌ಗೆ ಇಂದು ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ, ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಧಾರ್ಮಿಕ ಪ್ರಭಾಷಕ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ (ಪತ್ತಾನಾಪುರಂ, ಕೇರಳ) ಭೇಟಿ ನೀಡಿ ಸಂಸ್ಥೆಯ ಬೆಳವಣಿಗೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪಾಲುದಾರ ಇಕ್ಬಾಲ್ ಬಾಳಿಲ, “ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸಿರಾಜುದ್ದೀನ್ ಖಾಸಿಮಿ ಉಸ್ತಾದರು ನಮ್ಮ ಸಂಸ್ಥೆಗೆ ಭೇಟಿ ನೀಡಿರುವುದು ನಮಗೆ ಅಪಾರ ಸಂತೋಷದ ವಿಷಯ. ಅವರ ದುಆ ಮತ್ತು ಮಾರ್ಗದರ್ಶನ ಸದಾ ನಮ್ಮೊಂದಿಗೆ ಇರಲಿ” ಎಂದು ಹಾರೈಸಿದರು.

ಬಳಿಕ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಅವರನ್ನು ಕುಂಬ್ರದ ಹಿರಿಯ ಸಮಾಜಮುಖಿ ನಾಯಕ ಅಬ್ದುಲ್ ರಹ್ಮಾನ್ ಹಾಜಿ ಅರ್ಯಡ್ಕ ಅವರು ಶಾಲು ಹೊದಿಸಿ ಗೌರವಿಸಿದರು. ಉಸ್ತಾದರೊಂದಿಗೆ ಆಗಮಿಸಿದ್ದ ಖ್ಯಾತ ವಾಗ್ಮಿ ಅಬ್ರಾರಿ ಉಸ್ತಾದ್ ಅವರನ್ನೂ ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪಾಲುದಾರ ಮುಕ್ತಾರ್ ಕುಂಬ್ರ, ಉದ್ಯಮಿ ಶರಫುದ್ದೀನ್ ಕುಂಬ್ರ, ಮ್ಯಾನೇಜ್ಮೆಂಟ್ ತಂಡದ ನಿಝಾಮುದ್ದೀನ್ ಬಾಳಿಲ, ಅಶ್ರಫ್ ಸನ್ ಶೖನ್ ಕುಂಬ್ರ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಹತ್ತನೇ ವರ್ಷದ ಸಂಭ್ರಮದಲ್ಲಿರುವ ಇಂಡಿಯನ್ ಇವೆಂಟ್ ಆ್ಯಂಡ್ ವೆಡ್ಡಿಂಗ್ಸ್ ಸಂಸ್ಥೆಯ ಮುಂದಿನ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಉಸ್ತಾದರು ದುವಾ ನೆರವೇರಿಸಿ ಶುಭ ಹಾರೈಸಿದರು.

ಇದನ್ನೂ ಓದಿರಿ...