janadhvani

Kannada Online News Paper

ಕಡಬ: ಶಿಲುಬೆ ಕಿತ್ತು ಧ್ವಜ ಹಾರಿಸಿದ ದುಷ್ಕರ್ಮಿಗಳು- ಕ್ರಮ‌ ಕೈಗೊಳ್ಳುವಂತೆ ದೂರು ದಾಖಲು

ಕಡಬ,ಮೇ,06:-ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ದುರಸ್ಥಿಯಲ್ಲಿರುವ ಇಮ್ಯಾನುವಲ್ ಚರ್ಚ್ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜವನ್ನು ಹಾರಿಸಿರುವ ದುಷ್ಕರ್ಮಿಗಳ ವಿರುದ್ಧ ದೂರು ದಾಖಲು.

ಚರ್ಚ್ ನ ವಿದ್ಯುತ್ ಮೀಟರಿಗೆ ಹಾನಿ ಮಾಡಿ, ಚರ್ಚೊಳಗೆ ಹನುಮಂತನ ಫೋಟೋ‌ ಇಟ್ಟು ಗಲಭೆಗೆ ಯತ್ನಿಸಿದ್ದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿಯೋಗ ಚರ್ಚಿಗೆ ಭೇಟಿ ನೀಡಿ ಪರಿಶೀಲಿಸಿ ದುಷ್ಕರ್ಮಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ.ಹಾಗೂ ದುಷ್ಕರ್ಮಿಗಳ ವಿರುಧ್ದ ಎಸ್‌ಡಿಪಿಐ ಮುಖಾಂತರ ಚರ್ಚ್ ಫಾದ್ರಿಗಳ ಮೂಲಕ ಕೇಸು ದಾಖಲಿಸಲಾಯಿತು.

ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್ ಕಡಬ ,ಕಡಬ ಬ್ಲಾಕ್ ಉಪಾಧ್ಯಕ್ಷರಾದ ಬಶೀರ್ ಹಲ್ಯಾರ , ಕಾರ್ಯದರ್ಶಿ ಅಬ್ದುಲ್ ನಬಿ ಶಾನ್, ಸದಸ್ಯರಾದ ನೌಷದ್ ಕಡಬ, ನವಾಝ್, ಹಾರೀಶ್ ಕಳಾರ, ಆರೀಫ್ ಕೊಯಿಲ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com