janadhvani

Kannada Online News Paper

ಕುಪ್ಪೆಪದವು: ಕಿಸಾನ್ ರಿಪಬ್ಲಿಕ್ ಡೇ ಆಚರಣೆ

ಬದ್ರಿಯಾ ಜುಮಾ ಮಸ್ಜಿದ್, ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ಕುಪ್ಪೆಪದವು ಇದರ ವತಿಯಿಂದ 72 ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮತ್ತು ಕಿಸಾನ್ ರಿಪಬ್ಲಿಕ್ ಡೇ ಸಂದೇಶವು BJM ಅಧ್ಯಕ್ಷರಾದ K.ಉಮರಬ್ಬ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ಮಾತನಾಡಿ ಸಂವಿಧಾನದ ಉಳಿವು ರಾಷ್ಟ್ರದ ಉಳಿವಾಗಿದೆ.. ಪ್ರಜೆಗಳೇ ಪ್ರಭುವಾಗಿರುವ ಸುಂದರ ದೇಶದ ಕಾವಲುಗಾರರಾಗುವ ಮೂಲಕ ಸುಭದ್ರ ಭಾರತವನ್ನು ಕಟ್ಟೋಣ ಎಂದು ಕರೆ ನೀಡಿದರು..
BJM ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಫೀಖ್ ಆಚಾರಿಜೋರ, ಆಡಳಿತ ಸಮಿತಿ ಸದಸ್ಯರಾದ ಮುಹಮ್ಮದ್ ಶರೀಫ್ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ
ಆಡಳಿತ ಸಮಿತಿಯ ಕೋಶಾಧಿಕಾರಿ ಉಸ್ಮಾನ್ ಮುರ, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್, ಸದಸ್ಯರಾದ ಅಬೂಬಕರ್ ಪಡೀಲ್ ಪದವು, ಅಬ್ದುರ್ರಹ್ಮಾನ್ ( ಮೋನು ) ಮಾಜೀ ಅಧ್ಯಕ್ಷರಾದ DP ಹಮ್ಮಬ್ಬ ಮದ್ರಸ ಮುಅಲ್ಲಿಮರಾದ ಅಬ್ದುಲ್ ವಾಹಿದ್ ಮದನಿ ಅಲ್- ಅಝ್ಹರಿ ಮಿತ್ತೂರು, ಅಬ್ದರ್ರಹ್ಮಾನ್ ಮದನಿ ಅಲ್ ಅಝ್ಹರಿ -ಸರಳಿಕಟ್ಟೆ, ಉಮರುಲ್ ಫಾರೂಖ್ ಹಿಮಮಿ ಸಖಾಫಿ ಪೆರಾಲ , ಬದ್ರಿಯಾ ಸ್ವಲಾತ್ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಪದವಿನಂಗಡಿ.

ಮಸೀದಿ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ದರ್ಕಾಸ್ ,ಆಚಾರಿಜೋರ ಮದ್ರಸ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಚಾರಿಜೋರ ಸ್ವಲಾತ್ ಸಮಿತಿ ಜೊತೆ ಕಾರ್ಯದರ್ಶಿ ಜೀಲಾನಿ ಹಳೆನೀರು, ಸ್ವಲಾತ್ ಸಮಿತಿ ಸದಸ್ಯರಾದ ಇಬ್ರಾಹಿಂ ನಡುಪಳ್ಳ ಮದೀನತುಲ್ ಉಲೂಂ ವಿದ್ಯಾರ್ಥಿ ಒಕ್ಕೂಟ SBS ಅಧ್ಯಕ್ಷರಾದ ಅರ್ಫಾಝ್, ಸ್ಥಳೀಯ ಸಮಾಜ ಸೇವಕರಾದ ಗಂಗಾಧರ ಗೌಡ ,ಹಾಗೂ BJM ಜಮಾಅತ್ ಸದಸ್ಯರು ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ BJM ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ಸ್ವಾಗತಿಸಿ SBS ಪ್ರಧಾನ ಕಾರ್ಯದರ್ಶಿ ಮುಕದ್ದಿಮ್ ನೇಲಚ್ಚಿಲ್ ಧನ್ಯವಾದ ಗೈದರು.

error: Content is protected !! Not allowed copy content from janadhvani.com