ಮಂಗಳೂರು : ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ವಾರ್ಷಿಕ ಮಹಾಸಭೆಯು ದಿ:02-01-2021ರಂದು ಸೆಕ್ಟರ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಹನೀಫಿ ಬಜ್ಪೆ ಅವರ ಅಧ್ಯಕ್ಷತೆಯಲ್ಲಿ ಬಜ್ಪೆ ದಅವಾ ಸೆಂಟರ್ನಲ್ಲಿ ನಡೆಯಿತು.
ಡಿವಿಶನ್ ಉಪಾಧ್ಯಕ್ಷರಾದ ಉಬೈದುಲ್ಲಾಹ್ ಸಖಾಫಿ ಅಡ್ಡೂರು ದುಆದ ಮೂಲಕ ಸಭೆಗೆ ಚಾಲನೆ ನೀಡಿದರು. SჄS ಬಜ್ಪೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಶಾಫಿ ಮಾಸ್ಟರ್ ಸಭೆಯನ್ನು ಉದ್ಘಾಟಿಸಿದರೆ, ಮೂಡಬಿದ್ರೆ ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ ಗುರುಪುರ ಸಂಘಟನಾ ತರಗತಿ ನಡೆಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಜ್ಪೆ ವರದಿ ವಾಚಿಸಿದರೆ, ಸೆಕ್ಟರ್ ಕೋಶಾಧಿಕಾರಿ ಶಾಕಿರ್ ತಾರಿಕಂಬ್ಳ ಲೆಕ್ಕ ಪತ್ರ ಮಂಡಿಸಿದರು.
ಡಿವಿಶನ್ ವೀಕ್ಷಕರಾದ ಉಬೈದುಲ್ಲಾಹ್ ಸಖಾಫಿ ಅಡ್ಡೂರು ರವರ ನಿರ್ದೇಶನದಂತೆ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಿದರು.
20201ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಉಮರುಲ್ ಫಾರೂಖ್ ಹನೀಫಿ ಬಜ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಶಾಹಿಕ್ ಕಿನ್ನಿಪದವು, ಕೋಶಾಧಿಕಾರಿಯಾಗಿ ಫೈಝಲ್ ಬಜ್ಪೆ, ಉಪಾಧ್ಯಕಷರುಗಳಾಗಿ ಸುಲೈಮಾನ್ ಬಜ್ಪೆ ಮತ್ತು ಶಾಕಿರ್ ತಾರಿಕಂಬ್ಳ, ಕಾರ್ಯದರ್ಶಿಗಳಾಗಿ ಝಾಫರ್ ಜರಿನಗರ, ರಮೀಝ್ ಸೌಹಾರ್ದನಗರ, ಸಿನಾನ್ ಕಿನ್ನಿಪದವು, ಅರ್ಶ್ ಬಜ್ಪೆ, ನೂರುದ್ದೀನ್ ತಾರಿಕಂಬ್ಳ ಮತ್ತು ಮಹಝ್ ಅಹ್ಮದ್ ಜರಿನಗರ ಹಾಗೂ ಸದಸ್ಯರುಗಳಾಗಿ ಇಸ್ಮಾಯಿಲ್ ಬಜ್ಪೆ, ಝುಹೈರ್ ಜರಿನಗರ, ಸಿದ್ದೀಖ್ ಬಜ್ಪೆ, ರಮೀಝ್ ತಾರಿಕಂಬ್ಳ, ಮಝರ್ ತಾರಿಕಂಬ್ಳ, ಆಖಿಬ್ ಜರಿನಗರ, ಶಫೀಕ್ ಕಿನ್ನಿಪದವು, ಸವಾಲ್ ತಾರಿಕಂಬ್ಳ, ಇಶಾನ್ ಕಿನ್ನಿಪದವು, ಜಾಬಿರ್ ಬಜ್ಪೆ, ಹಬೀಬ್ ಜದಿನಗ, ಇಮ್ತಿಯಾಝ್ ಪಡೀಲ್ ಮತ್ತು ರಿಹಾಬ್ ಪಡೀಲ್ ಹೀಗೆ 25 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಈ ಸಂದರ್ಭದಲ್ಲಿ SჄS ಬಜ್ಪೆ ಸೆಂಟರ್ ನಾಯಕರಾದ ಅಬ್ದುಲ್ ಖಾದರ್ ಮುರ, ದ. ಕ ವೆಸ್ಟ್ ಝೋನ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಜರಿನಗರ, ಮೂಡಬಿದ್ರೆ ಡಿವಿಶನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸೆಕ್ಟರ್ ಹಾಲಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಜ್ಪೆ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಶಾಹಿಕ್ ಕಿನ್ನಿಪದವು ವಂದಿಸಿದರು.
ವರದಿ: ಸಿದ್ದೀಖ್ ಬಜ್ಪೆ
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ