janadhvani

Kannada Online News Paper

SSF ಪಳ್ಳಿಮಜಲು ವತಿಯಿಂದ ಸಂಘಟನಾ ತರಗತಿ

SSF ಪಳ್ಳಿಮಜಲು ಶಾಖೆ ವತಿಯಿಂದ ಸಂಘಟನಾ ತರಗತಿಯು ಜ.12 ರಂದು ರಾತ್ರಿ ಪಳ್ಳಿಮಜಲು SSF ಆಫೀಸ್ ನಲ್ಲಿ ಶಾಖಾ ನಾಯಕರಾದ ಇಕ್ಬಾಲ್ ಅಜಿಪಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಬೂಶಝು ಅಬ್ದುಲ್ ರಝಾಖ್ ಖಾಸಿಮಿ ರವರು ದುಆದ ಮೂಲಕ ಚಾಲನೆ ನೀಡಿ,ಸಂಘಟನೆಯ ಮಹತ್ವದ ಕುರಿತು ತರಗತಿ ನಡೆಸಿದರು. SSF ಬೆಳ್ಳಾರೆ ಸೆಕ್ಟರ್ ಅಧ್ಯಕ್ಷರಾದ ರಫೀಕ್ ಅಂಜದಿ ರವರು ಶುಭ ಹಾರೈಸಿದರು.

ಸ್ಥಳೀಯ ಇಮಾಮರಾದ ರಾಶಿದ್ ಅಹ್ಸನಿ, ಅಧ್ಯಾಪಕರಾದ ಹುಸೈನ್ ಜೌಹರಿ,ಸಿರಾಜುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷರಾದ ಇಬ್ರಾಹಿಂ ಬೀಡು,SYS ಬೆಳ್ಳಾರೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸೆಲಕ್ಟ್, SSF ಬೆಳ್ಳಾರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಶಮೀರ್ ಕಾವಿನಮೂಲೆ,S YS ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ನೇಲ್ಯಮಜಲು ಹಾಗೂSYS,SSF ನ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.
SYS ಜಿಲ್ಲಾ ನಾಯಕಾದ ಸಂಶುದ್ದೀನ್ ಝಂಝಂ ಸ್ವಾಗತಿಸಿ,ಶಾಖಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪಳ್ಳಿಮಜಲು ಧನ್ಯವಾದ ಸಮರ್ಪಿಸಿದರು.

error: Content is protected !! Not allowed copy content from janadhvani.com