janadhvani

Kannada Online News Paper

ಕುಂದಾಪುರ- ಆಶಾ ಕಾರ್ಯಕರ್ತೆಯರಿಗೆ ಜೀವಬೆದರಿಕೆ ಒಡ್ಡಿದ ಇಬ್ಬರು ಪೊಲೀಸ್ ವಶಕ್ಕೆ

ಕುಂದಾಪುರ (ಜನಧ್ವನಿ ವರದಿ) ಇತ್ತೀಚೆಗೆ ಬೆಂಗಳೂರಿನಿಂದ ಊರಿಗೆ ಮರಳಿದ ಯುವಕನೊಬ್ಬನಿಗೆ ಮನೆಯಲ್ಲೇ ಗೃಹ ಬಂಧನ ದಲ್ಲಿರಲು ಹೇಳಿದ ಆಶಾ ಕಾರ್ಯಕರ್ತೆ ಲಕ್ಷ್ಮೀ ಎಂಬವರಿಗೆ ಜೀವ ಬೆದರಿಕೆ ಒಡ್ಡಿದ ಘಟನೆ ವರದಿಯಾಗಿದ್ದು ಇದೀಗ ಈ ಯುವಕ ಮತ್ತು ಆತನ ಗೆಳೆಯನನ್ನೂ ಬಂಧಿಸಿ ಜೈಲಿಗಟ್ಟಲಾಗಿದೆ.

ಮದ್ದುಗುಡ್ಡೆ ನಿವಾಸಿಯಾಗಿರುವ ಸಂದೀಪ ಮೇಸ್ತ ಎಂಬಾತ ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಮರಳಿದ ಸುದ್ದಿ ಅರಿತ ಆಶಾ ಕಾರ್ಯಕರ್ತೆ ಆತನ ಮನೆಗೆ ತೆರಳಿ ಹೊರಗಡೆ ಎಲ್ಲೂ ಓಡಾಡದೆ ಮನೆಯಲ್ಲೇ ಇರುವಂತೆ ಸೂಚಿಸಿದ್ದು ಇದರಿಂದ ಕುಪಿತನಾದ ಸಂದೀಪ ತನ್ನ ಗೆಳೆಯ ಮಹೇಶ ಖಾರ್ವಿ ಎಂಬಾತನ ಜೊತೆ ಸೇರಿ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ನೀಡಿದ್ದ, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಆಶಾ ಕಾರ್ಯಕರ್ತೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದಾರೆ.

error: Content is protected !! Not allowed copy content from janadhvani.com