janadhvani

Kannada Online News Paper

ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪದಗ್ರಹಣ ಹಾಗೂ ಸನ್ಮಾನ

ಉಡುಪಿ: ನಮ್ಮ ನಾಡ ಒಕ್ಕೂಟ (ರಿ) ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಗ್ರಹಣ ಮತ್ತು ವಕೀಲರನ್ನು ಹಾಗೂ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಧಕರಿಗೆ ಗೌರವಿಸುವ ಕಾರ್ಯಕ್ರಮವು ಇತ್ತೀಚೆಗೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್ ರವರು ವಹಿಸಿದ್ದರು. 2024-25ನೇ ಸಾಲಿನ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಪುನರ್ ಆಯ್ಕೆಗೊಂಡ ಬೆಳ್ವೆ ಮುಸ್ತಾಕ್ ಅಹ್ಮದ್ ರವರಿಗೆ ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು. ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರು ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಉಡುಪಿ ಜಿಲ್ಲೆಯ ವಕೀಲ ವೃತ್ತಿಯಲ್ಲಿ ತೊಡಗಿಕೊಂಡಂತಹ ಹಾಗೂ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುರುತಿಸಿ ಈ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಎನ್ “ಎನ್ಎನ್ಓ ಸೇವಾ” ಪ್ರಶಸ್ತಿಯನ್ನು ಎನ್ಎನ್ಓ ಸೆಂಟ್ರಲ್ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಹುಸೈನ್ ಹೈಕಾಡಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ, ಉದ್ಯಾವರದ ಶೈಖ್ ವಾಹಿದ್ ದಾವೂದ್ ಸಾಹೇಬ್,ನಿವೃತ್ತ ಕಮಾಂಡರ್ ಆದ ಪಿ.ಎ. ಮೊಹಿದ್ದೀನ್ ಸಾಹೇಬ್, ಸಮಾಜ ಸೇವಕರಾದ ಉಡುಪಿಯ ಪೀರ್ ಮೊಹಮ್ಮದ್ ಸಾಹೇಬ್, ಕುಂದಾಪುರದ ಎಸ್. ದಸ್ತಗೀರ್ ಸಾಹೇಬ್ ರವರನ್ನು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಂಥ ಕೆಲವು ಸಾಧಕರನ್ನು ಗುರುತಿಸಿ “ಎನ್ಎನ್ಓ ಸಮಾಜ ಸೇವಾ “ಪ್ರಶಸ್ತಿಯ ರೂಪದಲ್ಲಿ ಸನ್ಮಾನಿಸಲಾಯಿತು.

ನಮ್ಮ ನಾಡ ಒಕ್ಕೂಟ ಟ್ರಸ್ಟ್ ನ ಏನ್.ಎಸ್.ಅಕಾಡಮಿ ಕಾರ್ಕಳ ಸಂಸ್ಥೆಗೆ ಕಟ್ಟಡವನ್ನು ನೀಡಿರುವ ನೀಡಿರುವ ದಾನಿ ಮೊಹಸಿನ್ ಅಹ್ಮದ್ ಕಾರ್ಕಳ ರವರನ್ನೂ ಈ ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಕೆ.ಅನ್ವರ್ ಪಾಷಾ, ಕೆ.ಪಿ.ಸಿ.ಸಿ. ಅಲ್ಪ ಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಸಿರಾಜ್, ಏನ್.ಏನ್.ಓ ಸೆಂಟ್ರಲ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ , ಲಕ್ಕಿಸ್ಟಾರ್ ,ಹೋಟೆಲ್ ಮಣಿಪಾಲ್ ಇನ್ ನ ಮಾಲೀಕರಾದ ಮೌಲಾನಾ ಇಬ್ರಾಹಿಂ ಗೋವಾ, ಏನ್.ಏನ್.ಓ ಸೆಂಟ್ರಲ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಹುಸೈನ್ ಕಾರ್ಕಳ, ಏನ್.ಏನ್.ಓ ಟ್ರಸ್ಟೀಗಳದ ಕೆ.ಎಸ್.ಎಂ.ಶಬ್ಬೀರ್ ಸಾಹೇಬ್, ಮೊಹಮ್ಮದ್ ಅಲಿ ಉಚ್ಚಿಲ, ಮೊಹಸಿನ್ ಅಹ್ಮದ್ ಕಾರ್ಕಳ, ಉಡುಪಿ ಜಿಲ್ಲೆಯ ನೂತನ ಪದಾಧಿಕಾರಿಗಳಾದ ಗಂಗೊಳ್ಳಿ ಮೊಹಮ್ಮದ್ ರಫೀಕ್ – ಜಿಲ್ಲಾ ಗೌರವ ಅಧ್ಯಕ್ಷರು, ಝಹೀರ್ ನಾಖುದಾ ಗಂಗೊಳ್ಳಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶೈಖ್ ವಾಹಿದ್ ದಾವೂದ್ – ಜಿಲ್ಲಾ ಸಂಯೋಜಕರು, ಮೊಹಮ್ಮದ್ ಸುಹಾನ್ ಸಾಸ್ತಾನ – ಜಿಲ್ಲಾ ಸಂಘಟನಾ ಕಾರ್ಯದರ್ಶಿ, ನಕ್ವಾ ಯಾಹ್ಯಾ ಮಲ್ಪೆ – ಜಿಲ್ಲಾ ಖಜಾಂಜಿ, ಹಜ್ಮತ್ ಅಬ್ದುಲ್ ರಹಿಮಾನ್ ಹೆಜಮಾಡಿ – ಜಿಲ್ಲಾ ಕಾನೂನು ಸಲಹೆಗಾರರು, ಟಿ.ಎಂ.ಝಫ್ರುಲ್ಲಾಹ್ ಸಾಹೇಬ್ – ಜಿಲ್ಲಾ ಕ್ರೀಡಾ ಸಂಯೋಜಕರು, ಮೊಹಮ್ಮದ್ ಅರ್ಫಾತ್ ಬೆಳ್ವೆ – ಜಿಲ್ಲಾ ಯುವ ಸಂಘಟನೆಯ ಅಧ್ಯಕ್ಷರು, ಅಬ್ದುಲ್ ಖಾದರ್ – ಜಿಲ್ಲಾ ಯುವ ಸಂಯೋಜಕರು, ನಝೀರ್ ಸಾಹೇಬ್ ನೇಜಾರ್ – ಉಡುಪಿ ತಾಲೂಕು ಅಧ್ಯಕ್ಷರು, ಎಸ್. ದಸ್ತಗೀರ್ ಸಾಹೇಬ್ – ಕುಂದಾಪುರ ತಾಲೂಕು ಅಧ್ಯಕ್ಷರು, ಮಾಮ್ಬ್ಡ್ ಇಬ್ರಾಹಿಂ ಶಿರೂರು – ಬೈಂದೂರು ತಾಲೂಕು ಉಪಾಧ್ಯಕ್ಷರು, ಮೊಹಮ್ಮದ್ ಅನ್ಸಾರ್ – ಹೆಬ್ರಿ ತಾಲೂಕು ಉಪಾಧ್ಯಕ್ಷರು, ತಾಜುದ್ದೀನ್ ಇಬ್ರಾಹಿಂ – ಬ್ರಹ್ಮಾವರ ತಾಲೂಕು ಅಧ್ಯಕ್ಷರು, ಅಶ್ರಫ್ – ಕಾಪು ತಾಲೂಕು ಅಧ್ಯಕ್ಷರು ಹಾಗೂ ಶಾಕೀರ್ ಹುಸೈನ್ – ಕಾರ್ಕಳ ತಾಲೂಕು ಅಧ್ಯಕ್ಷರು, ನಿಕಟಪೂರ್ವ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಶದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಹುಸೈನ್ ಹೈಕಾಡಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು, ಮುಷ್ಟಾಕ್ ಹೆನ್ನಾಬೈಲ್ ರವರು ಸನ್ಮಾನ ಪಾತ್ರವನ್ನು ವಾಚಿಸಿದರು. ಬೆಳ್ವೆ ಜುಮಾ ಮಸೀದಿಯ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ಬೆಳ್ವೆ ಕಿರಾತ್ ಪಠಿಸಿ ಪ್ರಾರ್ಥಿಸಿದರು . ಕುಂದಾಪುರ ತಾಲೂಕು ಸಮಿತಿಯ ಸದಸ್ಯರಾದ ಉಸ್ಮಾನ್ ಪಳ್ಳಿ ಹಾಗೂ ಕುಂದಾಪುರ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಫಝಲ್ ಕಾರ್ಯಕ್ರಮ ನಿರೂಪಿಸಿದರು.. ಜಿಲ್ಲಾ ಉಪಾಧ್ಯಕ್ಷರಾದ ಅಬು ಮೊಹಮ್ಮದ್ ಮುಜಾವರ್ ವಂದಿಸಿದರು.

error: Content is protected !! Not allowed copy content from janadhvani.com