janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಹಾಸನ ಜಿಲ್ಲೆ: ಮಧುಗಿರಿ ಮೋದಿ ವಿರುದ್ಧ ದೂರು

ಹಾಸನ: ಶಾಂತಿಯುತ ಸಮಾಜದೆಡೆಯಲ್ಲಿ ಕೋಮು ವಿಷ ಬೀಜವನ್ನು ಬಿತ್ತುತ್ತಿರುವ, ಮಧುಗಿರಿ ಮೋದಿ ವಿರುದ್ಧ ಹಾಸನ ಜಿಲ್ಲಾ ಮುಸ್ಲಿಂ ಜಮಾಅತ್ ದೂರು ದಾಖಲಿಸಿದೆ.

ತನ್ನ ಫೇಸ್ಬುಕ್ ಖಾತೆಯಲ್ಲಿ ಸದಾ ಧರ್ಮ ನಿಂದನೆಯಲ್ಲೇ ತಲ್ಲೀನನಾಗಿರುವ ಮಧುಗಿರಿ ಮೋದಿಯು ಇತ್ತೀಚೆಗೆ ಪ್ರವಾದಿ (ಸ ಅ) ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕೋಮುದಳ್ಳುರಿಗೆ ಪ್ರಚೋದನೆ ನೀಡಿದ್ದಾನೆ. ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಕಾಪಾಡಲು ಮುಂದಾಗಬೇಕೆಂದು ಕೋರಿ, ಹಾಸನ ಜಿಲ್ಲಾ ಮುಸ್ಲಿಂ ಜಮಾಅತ್ ವತಿಯಿಂದ ಹಾಸನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ (SP) ಯವರಿಗೆ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ, ಜಿಲ್ಲಾ ಅದ್ಯಕ್ಷ ಅಬೂಬಕ್ಕರ್ ಹಾಜಿ ಕಲೇಶಪುರ, ಪ್ರ ಕಾರ್ಯದರ್ಶಿ ಮೌಲಾನ ತಕೀ ಅಹ್ಮದ್ ಹಾಸನ, ಪರ್ವೇಝ್ ಪಾಷ ಹಾಸನ, ಮಹಮ್ಮದ್ ಆಲಿ ಕುಡುಗರಹಳ್ಳಿ,ಹಸೈನಾರ್ ಆನೆಮಹಲ್, ಬಷೀರ್ ಹಾಜಿ ಹಾಸನ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com