janadhvani

Kannada Online News Paper

ಬಡವರೊಬ್ಬರ ಮನೆಕಟ್ಟಲು ಭಾಗಿಯಾದ ಸುಳ್ಯ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ಇಸಾಬ ತಂಡ

ಸುಳ್ಯ: ಅಜ್ಜಾವರದ ಬಡ ಕುಟುಂಬದ ಮನೆಯ ಕೆಲಸವೊಂದು ಸುಳ್ಯ ತಹಶೀಲ್ದಾರ್‌ರವರ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿದ್ದು, ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್. ಟೀಂ ಇಸಾಬ ಸದಸ್ಯರು ಸ್ವಯಂ ಸೇವೆಯ ಮೂಲಕ ಮನೆಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡರು. ಬೆಳಿಗ್ಗೆಯಿಂದ ಸಂಜೆಯವರೆಗೂ ಮೇಸ್ತ್ರಿ ಕೆಲಸ ಹಾಗೂ ಹೆಲ್ಪರ್ ಕೆಲಸಗಳೆಲ್ಲದರಲ್ಲೂ ದುಡಿದು ಊರಿನವರ ಹಾಗೂ ತಹಶೀಲ್ದಾರ್‌ರವರ ಪ್ರಶಂಸೆಗೆ ಪಾತ್ರರಾದರು.

ಮನೆಕಟ್ಟುವ ಕೆಲಸದಲ್ಲಿ ತಂಡದ ಕ್ಯಾಪ್ಟನ್ ರಫೀಕ್ ಸುಳ್ಯ, ಉಸ್ತುವಾರಿ ಸಿದ್ದೀಖ್ ಗೂನಡ್ಕ, ಸದಸ್ಯರಾದ ಶರೀಫ್ ಜಯನಗರ, ರಹೀಂ ಪೈಚಾರು, ಸಿದ್ದೀಖ್ ಕಟ್ಟೆಕ್ಕಾರ್, ನೌಷಾದ್ ಕೆರೆಮೂಲೆ, ಮುತ್ತಲಿಬ್ ಅಜ್ಜಾವರ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com