ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಬನಶಂಕರಿ ಸೆಕ್ಟರನ್ನು ಇತ್ತೀಚೆಗೆ ಮಡಿವಾಳ ಸಾವೊರಿ ಹೋಟೆಲ್ ನಲ್ಲಿ ಜಿಲ್ಲಾ ಕ್ಯಾಂಪಸ್ ಸೆಕ್ರೇಟರಿ ಶಬೀಬ್ ರವರ ನೇತೃತ್ವದಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ಸಿದ್ದೀಕ್ ಸಖಾಫಿ ಬಾಜಾರು, ಪ್ರ.ಕಾರ್ಯದರ್ಶಿ ಮುಸ್ತಾಖ್ ಬಜ್ಪೆ, ಕೋಶಾಧಿಕಾರಿಯಾಗಿ ಸಂಶುದ್ದೀನ್ ಕಕ್ಕಿಂಜೆ, ಕ್ಯಾಂಪಸ್ ಸೆಕ್ರೇಟರಿ ಜುನೈದ್ ಯಾರಬ್ ನಗರ.
ಉಪಾಧ್ಯಕ್ಷರಾಗಿ ಅಬ್ದುಲ್ ಮಜೀದ್ ನಿಝಾಮಿ, ಅಝರುದ್ದೀನ್.ಕಾರ್ಯದರ್ಶಿಯಾಗಿ ಅಬೂಬಕ್ಕರ್, ಹನೀಫ್ ವಿಟ್ಲ ರವರನ್ನು ಆರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಮೆಜೆಸ್ಟಿಕ್, ಅನ್ವರ್ ಮುಸ್ಲಿಯಾರ್, ಜಿಲ್ಲಾ ಕಾರ್ಯದರ್ಶಿ ಶಿಹಾಬ್ ಮಡಿವಾಳ, ಡಿವಿಷನ್ ಅಧ್ಯಕ್ಷ ಸಂಶುದ್ದೀನ್ ಅಝ್ಹರಿ ಭಾಗವಹಿಸಿದ್ದರು.