janadhvani

Kannada Online News Paper

ಕೊಣಾಜೆ: ಎಸ್ ಎಸ್ ಎಫ್ ಪಜೀರ್ ಶಾಖೆಯ “ಯವ್ವನ ಮರೆಯಾಗುವ ಮುನ್ನ” ಯುನಿಟ್ ಕಾನ್ಫರೆನ್ಸ್ ಪಜೀರ್ ಮಸ್ಜಿದುಲ್ ಮದೀನ ನಡುಹಿತ್ಲು ವಠಾರದಲ್ಲಿ ಶಾಖಾಧ್ಯಕ್ಷ ಉಸ್ಮಾನ್ ಜೋಗಿಬೆಟ್ಟು ರವರ ಅಧ್ಯಕ್ಷತೆಯಲ್ಲಿ ಜರುಗಿತು.ಉಳ್ಳಾಲ ಡಿವಿಶನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಮುಖ್ಯ ಪ್ರಭಾಷಣಗೈದರು. ಕಾರ್ಯ ಕ್ರಮಕ್ಕೆ ಸಯ್ಯಿದ್ ಮುಸ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ರವರು ನೇತೃತ್ವ ನೀಡಿದರು. ಇಸ್ಮಾಯಿಲ್ ಮಾಸ್ಟರ್ ಉಧ್ಘಾಟನೆಗೈದರು. ಸಯ್ಯಿದ್ ಖುಬೈಬ್ ತಂಙಳ್, ರಶೀದ್ ಸಅದಿ ಪರಪ್ಪು, ಸಿದ್ದೀಖ್ ಸಖಾಫಿ ಪಜೀರ್ ಪ್ರಾಸ್ತವಿಕ ಭಾಷಣಮಾಡಿದರು.
ವೇದಿಕೆಯಲ್ಲಿ ಎ.ಪಿ. ಹನೀಫ್ ಕಾಪಿಕ್ಕಾಡ್, ಮುಹಮ್ಮದ್ ನಡುಹಿತ್ಲು ಕಾಂಟ್ರಾಕ್ಟರ್, ಅಬ್ಬಾಸ್ ಜೋಗಿಬೆಟ್ಟು, ಬಿ ಅಬೂಬಕ್ಕರ್ ಮದನಿ, ಎಸ್ ಎಸ್ ಎಫ್ ನಾಯಕರುಗಳಾದ ಹಮೀದ್ ತಲಪಾಡಿ, ಅಬೂಸ್ವಾಲಿ ಹರೇಕಳ, ನೌಫಲ್ ಫರೀದ್ ನಗರ, ಜಲೀಲ್ ಆರ್ ಜಿ ನಗರ, ಅಬೂಸ್ವಾಲಿ ಪಜೀರ್
ಎಸ್ ವೈ ಎಸ್ ನಾಯಕರಾದ ಮುಹಮ್ಮದ್ ನಡುಹಿತ್ಲು, ಅಬ್ದುಲ್ ರಝಾಕ್ ಆಲಡ್ಕ ಮುಂತಾದವರು ಉಪಸ್ಥಿತರಿದ್ದರು

ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮದನಿ ಸ್ವಾಗತಿಸಿ, ನಿರೂಪಿಸಿದರು

error: Content is protected !! Not allowed copy content from janadhvani.com