ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಪೇರಿಮಾರ್ ಶಾಖೆ ವತಿಯಿಂದ ಯುನಿಟ್ ಕಾನ್ಫರೆನ್ಸ್ ಇತ್ತೀಚೆಗೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ಪೇರಿಮಾರ್ ಶಾಖಾ ಅಧ್ಯಕ್ಷ ನಝೀರ್. ಪಿ ವಹಿಸಿದರು. ಮಸ್ಜಿದುಳ್ ಖಿಳರ್ ಪೇರಿಮಾರ್ ಖತೀಬರು ರಫೀಕ್ ಸ-ಅದಿ ಅಲ್ ಅಫ್ಳಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. SSF ಪೇರಿಮಾರ್ ಶಾಖಾ ಕಾರ್ಯದರ್ಶಿ ಮೊಹಮ್ಮದ್ ಉನೈಸ್. ಬಿ ಸ್ವಾಗತಿಸಿದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಪುದು ಗ್ರಾಮ ಪಂಚಾಯತ್ ಸದಸ್ಯರು ಹುಸೈನ್, ಮಸ್ಜಿದುಳ್ ಖಿಳರ್ ಪೇರಿಮಾರ್ ಅಧ್ಯಕ್ಷ PM ಶಾಫಿ, SYS ಪೇರಿಮಾರ್ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಳೂಲ್, SSF ಪೇರಿಮಾರ್ ಶಾಖಾ ಮಾಜೀ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ದಾರುಲ್ ಉಲೂಂ ಮದರಸ ಪೇರಿಮಾರ್ ಮುಖ್ಯೋಪಾಧ್ಯಾಯರಾದ ಮುಹಮ್ಮದ್ ನಿಝಾಮಿ, ಮುಅಲ್ಲಿಮರಾದ ನವಾಝ್ ಝೈನಿ, ಅಬೂಬಕರ್ ಸಿದ್ದೀಕ್ ಲತೀಫಿ, ಮುಡಿಪ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಇಸ್ಮಾಯಿಲ್ 10th ಮೈಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. SSF ಪೇರಿಮಾರ್ ಶಾಖಾ ಉಪಾಧ್ಯಕ್ಷ ಶಿಹಾಬ್ ಕೃತಜ್ಞತೆ ಸಲ್ಲಿಸಿದರು.