janadhvani

Kannada Online News Paper

ಅ.28:ಉತ್ತರ ಕನ್ನಡ ಜಿಲ್ಲಾ ಎಸ್.ವೈ.ಎಸ್ ಅಸೆಂಬ್ಲಿ ಹಾಗೂ ಎಸ್ಸೆಸ್ಸೆಫ್ ಚುನಾವಣಾ ಕಾರ್ಯಾಗಾರ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಎಸ್.ವೈ.ಎಸ್ ಅಸೆಂಬ್ಲಿ ಹಾಗೂ ಎಸ್ಸೆಸ್ಸೆಫ್ ಚುನಾವಣಾ ಕಾರ್ಯಾಗಾರ ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಮೌಲಾನಾ ಇರ್ಫಾನ್ ರವರ ಅಧ್ಯಕ್ಷತೆಯಲ್ಲಿ ಸುಲ್ತಾನ್ ಮಸ್ಜಿದ್ ಖಾಝಿ ಗಲ್ಲಿ ಶಿರಸಿಯಲ್ಲಿ ಅಕ್ಟೋಬರ್ 28 ಆದಿತ್ಯವಾರ ಬೆಳಿಗ್ಗೆ 9:00 ಗಂಟೆಗೆ ನಡೆಯಲಿರುವುದು.
ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸಯ್ಯದ್ ಅಲವಿ ತಂಙಳ್ ದುಆ: ನಡೆಸುವರು.

ಉತ್ತರ ಕನ್ನಡ ಜಿಲ್ಲಾ ಖಾಝಿ ಮುಫ್ತಿ ಸಯ್ಯದ್ ಇಷ್ತಿಯಾಕ್ ಅಹ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ತರಗತಿಯನ್ನು ನಡೆಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ನಗರ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವರು.

ಕಾರ್ಯಕ್ರಮದಲ್ಲಿ ಸಯ್ಯದ್ ಮಂಝರ್ ಹುಸೈನ್,ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ರವೂಫ್ ಖಾನ್ ಉಡುಪಿ,ನವಾಝ್ ಭಟ್ಕಲ್,ಡಾ ಯಹ್ಯ ಹಾಜಿ ಭಟ್ಕಳ್,ಎ.ಕೆ ರಝಾ ಅಂಜದಿ,ಉಸ್ಮಾನ್ ಮದನಿ,ಆರಿಫ್ ಸ ಅದಿ,ಪೈಝಲ್ ಶಿರಸಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

error: Content is protected !! Not allowed copy content from janadhvani.com