janadhvani

Kannada Online News Paper

ಜೂ.21: ಬಜ್ಪೆಯಲ್ಲಿ ಪೊಸೋಟ್ ತಂಙಳ್ ಅನುಸ್ಮರಣೆ, ಮುಈನುಸುನ್ನಾ ಸಮಾವೇಶ

ಮಂಗಳೂರು: ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಸೇವೆಗಾಗಿ ಕಾರ್ಯನಿರತವಾಗಿರುವ ಮುಈನುಸುನ್ನಾ ಅಕಾಡೆಮಿ ಹಾವೇರಿ ಇದರ ಸಂಸ್ಥಾಪಕರಾದ ಸಯ್ಯಿದ್ ಪೊಸೋಟ್ ತಂಙಳ್ ಅವರ ಅನುಸ್ಮರಣೆ ಸಮಾವೇಶವು ಜೂನ್ 21 ಶುಕ್ರವಾರ ಸಂಜೆ 7 ಗಂಟೆಗೆ ಬಜ್ಪೆ ಎಂಜೆಎಂ‌ ಸಭಾಂಗಣದಲ್ಲಿ ನಡೆಯಲಿದೆ.

ಮಳ್‌ಹರ್ ವಿದ್ಯಾಸಂಸ್ಥೆ ಹೊಸಂಗಡಿ ಇದರ ಪ್ರಿನ್ಸಿಪಾಲ್ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ತಂಙಳ್ ಪೊಸೋಟ್ ನೇತೃತ್ವ ವಹಿಸಲಿದ್ದಾರೆ.

ಮುಹಿಮ್ಮಾತ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ ಬಶೀರ್ ಮದನಿ ಕೂಳೂರು, ಮುಈನುಸುನ್ನಾ ಅಕಾಡೆಮಿ ಪ್ರಮುಖರಾದ ಕೆ ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಮುಸ್ತಫಾ ನಈಮಿ ಹಾವೇರಿ, ಶೈಖ್ ಬಾವ ಹಾಜಿ ಮಂಗಳೂರು, ಬದ್ರುದ್ದೀನ್ ಹಾಜಿ ಬಜ್ಪೆ, ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದಿರ್ ಭಾಗವಹಿಸಲಿದ್ದಾರೆ.