janadhvani

Kannada Online News Paper

ಮರಿಕ್ಕಳ ತಾಜುಲ್ ಫುಖಹಾಅ್ ದರ್ಸ್ ಪುನರಾರಂಭ

ಮೊಂಟೆಪದವು: ಮರಿಕ್ಕಳ ಜಮಾಅತ್ ವತಿಯಿಂದ ನಡೆಯುವ ತಾಜುಲ್ ಫುಖಹಾಅ್ ದರ್ಸ್ ಡಾ| ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ ಹಝ್ರತ್ ನೇತೃತ್ವದಲ್ಲಿ ನಡೆಯಿತು. ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಕೊಡಗು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ,ಮುಅಲ್ಲಿಂರಾದ ಜಬ್ಬಾರ್ ಅದಿ,ಶಫೀಕ್ ಸಖಾಫಿ,ಇಸ್ಮಾಯಿಲ್ ಫಾಳಿಲ್,ಜಮಾಆತ್ ಕೋಶಾಧಿಕಾರಿ ಹನೀಫ್ ಶೈನ್,ಕಾರ್ಯದರ್ಶಿಗಳಾದ ಆಲಿಕುಂಞಿ ಮೋಂಟುಗೋಳಿ, ಅಝರ್ ಅಗಲ್ತಬೆಟ್ಟು, ಜಮಾಅತ್ ನಾಯಕರಾದ ಪುತ್ತಚ್ಚ ಬರೆ, ಅಬ್ದುಲ್ಲ ಮದನಿ ಕೆಂಪುಗುಡ್ಡೆ, ಮಹಮ್ಮದ್ ಸಖಾಫಿ ಪೂಡಲ್, ಅಬೂಬಕ್ಕರ್ ಸಖಾಫಿ ಬರೆ, ಮಜೀದ್ ಸಅದಿ, ಮಹಮ್ಮದ್ ಮದನಿ ಪೂಡಲ್, ಅಶ್ರಫ್ ಮಜಲ್, ತಾಜುಲ್ ಫುಖಹಾಅ್ ಜಿಸಿಸಿ ಕಮಿಟಿ ನಾಯಕರಾದ ಆಸಿಫ್ ಕೆಂಪುಗುಡ್ಡೆ, ಹಮೀದ್ ಮದನಿ ದುಬೈ, ಯಝೀದ್ ಮಜಲ್, ಎಸ್ಸೆಸ್ಸೆಫ್ ನಾಯಕರಾದ ಶಾಕಿರ್ ಚಂದಹಿತ್ಲು ಮೊದಲಾದವರು ಉಪಸ್ಥಿತರಿದ್ದರು.

ಮರಿಕ್ಕಳ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ,ವಂದಿಸಿದರು.

error: Content is protected !! Not allowed copy content from janadhvani.com