janadhvani

Kannada Online News Paper

ಕೊಡಂಗಾಯಿ ಸುನ್ನೀ ಸೆಂಟರ್: ನೂತನ ಮಸ್ಜಿದ್ ಉದ್ಘಾಟನೆ

ವಿಟ್ಲ :ಸುನ್ನೀ ಸೆಂಟರ್ ಕೊಡಂಗಾಯಿ ಇದರ ನೂತನ ಮಸ್ಜಿದ್ ಉದ್ಘಾಟನೆ ಸಮಾರಂಭವು ಫೆ. 15 ಗುರುವಾರ ಸಂಜೆ ಕುಂಬೋಳ್ ಸಯ್ಯಿದ್ ಮುಕ್ತಾರ್ ತಂಙಳ್ ರವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಖುನಾ ವಾಲೆಮುಂಡೋವ್ ಉಸ್ತಾದ್ ನಿರ್ವಹಿಸಿ ವಕ್ಫ್ ನಿರ್ವಹಣೆ ನಡೆಸಿದರು.ಸಯ್ಯಿದ್ ಇಬ್ರಾಹೀಮ್ ಪೂಕುಂಞ್ಞಿ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಸಯ್ಯಿದ್ ಶಮೀಮ್ ತಂಙಲ್ ದಾರುನ್ನಜಾತ್ ಮಹಮ್ಮದ್ ಮುಸ್ಲಿಯರ್ ಇಮಾಂ ದುಬೈ, ಸಿರಾಜುದ್ದೀನ್ ಸಖಾಫಿ ಮುಖ್ಯ ಭಾಷಣ ನಡೆಸಿದರು.

ಮಸೀದಿ ನಿರ್ಮಾಣಕ್ಕೆ ಕಾರಣಕರ್ತರಾದ ಅಸ್ಲಂ ಹಾಜಿ, ಮಹಮ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಹಾಜಿ ಇವರನ್ನು ಸನ್ಮಾನಿಸಲಾಯಿತು. ಮಗ್ ರಿಬ್ ನಮಾಜ್ ಬಳಿಕ ದಾರುನ್ನಜಾತ್ ಹಾಗೂ ಉಕ್ಕುಡ ದರ್ಸ್ ವಿದ್ಯಾರ್ಥಿಗಳಿಂದ ಮಹ್ಲರತುಳ್ ಬದ್ರಿಯಾ ಬರ್ದಾ ಮಜ್ಲಿಸ್ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಎಸ್ ಮೊಹಮ್ಮದ್ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ್,ರವೀಶ್ ಶೆಟ್ಟಿ ಕಾರ್ಕಳ, ನಾಗೇಶ್ ಶೆಟ್ಟಿ ,ಸಂದೇಶ್ ಶೆಟ್ಟಿ ,ರಾಜಾರಾಮ್ ಭಟ್ ಬಲಿಪಗೊಳಿ, ನಾರಾಯಣ ಭಟ್ ಕೆಬಿ, ಅಬ್ದುಲ್ ಖಾದರ್ ದಾರಿಮಿ, ಅಬ್ದುಲ್ ಖಾದರ್ ಫೈಝಿ ,ಉಸ್ಮಾನ್ ಸಖಾಫಿ,ಅಬ್ಬಾಸ್ ಮದನಿ,ಎಂಕೆ ಎಂ ಸಖಾಫಿ,ಹಬ್ದುಲ್ ಹಮೀದ್ ಸಖಾಫಿ, ಹಾಜಿ,ಇಸ್ಮಾಯಿಲ್ ಮದನಿ,ಕಲಂದರ್ ಶಾಕಿರ್ ಕೆ.ಬಿ ಅಬ್ದುಲ್ ರೆಹ್ಮಾನ್ ಮದನಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಸಹದಿ ಮುಸ್ತಫಾ ಜೋಹರಿ,ಹಸೈನಾರ್ ಮುಸ್ಲಿಯಾರ್ ಸುನ್ನಿ ಸೆಂಟರ್ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿ ಸಿಎಚ್ ಅಬ್ದುಲ್ ಖಾದರ್ ವಂದಿಸಿದರು.

error: Content is protected !! Not allowed copy content from janadhvani.com