janadhvani

Kannada Online News Paper

ತಾಜುಲ್ ಉಲಮಾ ಸುನ್ನೀ ಸೆಂಟರ್ NC ರೋಡ್: 10ನೇ ವಾರ್ಷಿಕ, ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ

ಬೋಳಂತೂರು: ವರ್ಷಂಪ್ರತಿ ತಾಜುಲ್ ಉಲಮಾ ಸುನ್ನೀ ಸೆಂಟರ್ ಎನ್,ಸಿ ರೋಡ್ ವತಿಯಿಂದ ಆಚರಿಸಿಕೊಂಡು ಬರುತ್ತಿರುವ
ತಾಜುಲ್ ಉಲಮಾ, ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ, ನೂರುಲ್ ಉಲಮಾ, ಸುರಿಬೈಲ್ ಉಸ್ತಾದ್, ಪಿ,ಎ ಉಸ್ತಾದ್, ಎ,ಪಿ‌ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಮತ್ತು ತಾಜುಲ್ ಉಲಮಾ ಸುನ್ನೀ ಸೆಂಟರ್ ಇದರ 10ನೇ ವಾರ್ಷಿಕ ಸಮ್ಮೇಳನ ಬೋಳಂತೂರು ಗ್ರಾಮದ ಎನ್,ಸಿ ರೋಡಲ್ಲಿ ದಿನಾಂಕ: 4/1/2024 ರ ಗುರುವಾರದಂದು ಬಹು | ಶೈಕುನಾ ಮಂಚಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಜೆ ಮಗ್ರಿಬ್ ನಮಾಝ್ ಬಳಿಕ ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ, ನೂರುಲ್ ಹುದಾ ದರ್ಸ್ ವಿಧ್ಯಾರ್ಥಿಗಳು ಒಕ್ಕೆತ್ತೂರು ಇವರ ಆಲಾಪಣೆಯೊಂದಿಗೆ ತಾಜುಲ್ ಉಲಮಾ ಮೌಲಿದ್ ಕಾರ್ಯಕ್ರಮ ನಡೆಯಿತು.

ಅಸ್ಸಯ್ಯಿದ್ ನೂರುಸ್ಸಾದತ್ ಬಾಯರ್ ತಂಙಳ್ ರವರು ದುಹಾ ಆಶೀರ್ವಚನೆ ಮಾಡಿದರು. ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅನುಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು,ದಾರುಲ್ ಅಶ್-ಅರಿಯ್ಯ ಸಂಸ್ಥೆಯ ಮ್ಯಾನೆಜರ್ ಮಹಮ್ಮದ್ ಅಲಿ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು, ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯ ಪ್ರಭಾಷಣ ಮಾಡಿದರು.
ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕುಬ್ ದಂಡೆಮಾರ್ ಅವರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಾಕ್ಷರಾದ ಎಂ,ಎಸ್ ಮಹಮ್ಮದ್,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕುಬ್ ದಂಡೆಮಾರ್,ಹಮೀದ್ ಮದನಿ ನಾರ್ಶ, ಮಹಮೋದ್ ಸಹದಿ ಶರೀಫ್ ಸಹದಿ. ಇಬ್ರಾಹಿಂ ಖಲೀಲ್ ಮಾಲಿಕಿ ಡಿ ಎನ್ ಹಮೀದ್ ಮದನಿ ಎನ್ ಡಿ ಅಬೂಬಕ್ಕರ್ ಮದನಿ ರಜಾಕ್ ಭಾರತ್ ಉಮ್ಮರ್ ಸಖಾಫಿ ಸೆರ್ಕಳ ಅಶ್ರಫ್ ಮುಸ್ಲಿಯಾರ್ ಇಬ್ರಾಹಿಂ ಮಜಲ್ ಕೋಡಿ
ಇಬ್ರಾಹಿಂ ಸಖಾಫಿ ಸೆರ್ಕಳ ಇಬ್ರಾಹಿಂ ಖಂಡಿಗ ದಾವುದು ಮಜಲ್ ಕೊಡಿ ಹಂಝ ಮಂಚಿ ಆಸ್ಲಾಂ ಸಂಪಿಲ
ಆಶ್ರಫ್ ಬಂಡಶಾಲೆ ದಾವುದು ಕಲ್ಲಡ್ಕ ಅಕ್ಬರ್ ಅಲಿ ಮದನಿ ಅಬ್ಬಾಸ್ ಮುಸ್ಲಿಯರ್ ಅಬ್ದುಲ್ಲ ನಾರಂಕೋಡಿ ಹೈದರ್ ಕುಡುಂಬಕೊಡಿ
ಉಮರಬ ಶಾಮಿಯಾನ ಹಮಿದ್ ಕುಲಿಯಾರ್ ಹಮೀದ್ ಉಸ್ತಾದ್ ಅಂಗಡಿ ಬಿ ಎಂ ಅಬ್ದುಲ್ ಖಾದರ್ ಮುಸ್ಲಿಯರ್ ಫಾರೂಕ್ ಬಿಜಿ ಯಾಕುಬ್ ನಾರ್ಸ ರಫೀಕ್ ಮಾಡದಬಲಿ ರಹೀಂ ಕುಡುಂಬಕೋಡಿ, ಕಬೀರ್ ಖಂಡಿಗ ಅಬ್ದುಲ್ ರಹಮಾನ್ ಟವರ್ ಇಬ್ರಾಹಿಂ ತೋಟಾಲ್
ಇಕ್ಬಾಲ್ ಸಿಂಗಾರಿ ಪಂಚಾಯತ್ ಸದಸ್ಯರಾದ
ಅಶ್ರಫ್ ಸೆಡ್,ಅನ್ಸಾರ್ ಬಿ.ಜಿ ಹಾಗೂ ಉಲಮಾ ಉಮರಾಗಳುಭಾಗವಹಿಸಿದರು. ಸಿದೀಕ್ ಸಅದಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com