janadhvani

Kannada Online News Paper

ತಾಜುಲ್ ಉಲಮಾ ಸುನ್ನೀ ಸೆಂಟರ್ NC ರೋಡ್: 10ನೇ ವಾರ್ಷಿಕ ಮತ್ತು ಅನುಸ್ಮರಣಾ ಸಮ್ಮೇಳನ

ತಾಜುಲ್ ಉಲಮಾ ಸುನ್ನೀ ಸೆಂಟರ್ ಎನ್,ಸಿ ರೋಡ್ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ತಾಜುಲ್ ಉಲಮಾ,ಕಣ್ಣಿಯತ್ ಉಸ್ತಾದ್,ಶಂಸುಲ್ ಉಲಮಾ,ನೂರುಲ್ ಉಲಮಾ,ಸುರಿಬೈಲ್ ಉಸ್ತಾದ್, ಪಿ,ಎ ಉಸ್ತಾದ್, ಎ,ಪಿ‌ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಮತ್ತು ಅಗಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಮತ್ತು ತಾಜುಲ್ ಉಲಮಾ ಸುನ್ನೀ ಸೆಂಟರ್ ಇದರ 10ನೇ ವಾರ್ಷಿಕ ಸಮ್ಮೇಳನ ಬೋಳಂತೂರು ಗ್ರಾಮದ ಎನ್,ಸಿ ರೋಡಲ್ಲಿ ಮುಂದಿನ ಜ.4 ರ ಗುರುವಾರದಂದು ಎನ್,ಸಿ ರೋಡಲ್ಲಿ ಬಹು|ಶೈಖುನಾ ಮಂಚಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಂಜೆ ಮಗ್ರಿಬ್ ನಮಾಝ್ ಬಳಿಕ ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ, ನೂರುಲ್ ಹುದಾ ದರ್ಸ್ ವಿಧ್ಯಾರ್ಥಿಗಳು ಒಕ್ಕೆತ್ತೂರು ಇವರ ಆಲಾಪಣೆಯೊಂದಿಗೆ ತಾಜುಲ್ ಉಲಮಾ ಮೌಲಿದ್ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8:30ಕ್ಕೆ ಅಸ್ಸಯ್ಯಿದ್ ನೂರುಸ್ಸಾದಾತ್ ಬಾಯಾರ್ ತಂಙಳ್ ರವರ ದುಆ ಆಶೀರ್ವಚನದೊಂದಿಗೆ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅನುಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದು,ದಾರುಲ್ ಅಶ್-ಅರಿಯ್ಯ ಸಂಸ್ಥೆಯ ಮ್ಯಾನೆಜರ್ ಮಹಮ್ಮದ್ ಅಲಿ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಪೇರೋಡು ಮುಹಮ್ಮದ್ ಅಝ್ಹರಿ ಮುಖ್ಯ ಭಾಷಣ ಮಾಡಲಿದ್ದಾರೆ.

ಅಲ್ಲದೆ ಕಾರ್ಯಕ್ರಮದಲ್ಲಿ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ,ಈ ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರೀತಿ ಪೂರ್ವಕ ಸ್ವಾಗತಿಸುವ S M A ಜಿಲ್ಲಾ ಸದಸ್ಯರಾದ ರಫೀಕ್ ಮಾಡದ ಬಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: Content is protected !! Not allowed copy content from janadhvani.com