janadhvani

Kannada Online News Paper

ಅಕ್ಷಯ ಚಾರಿಟೇಬಲ್ ಟ್ರಸ್ಟ್: ಸೆರ್ಕಳ ಮತ್ತು ಕಡಂಬು ಶಾಲಾ ವಿದ್ಯಾರ್ಥಿಗಳ ರಕ್ತ ಗುಂಪು ವರ್ಗೀಕರಣ ಶಿಬಿರ

ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಕಡಂಬು ಶಾಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ವತಿಯಿಂದ ಉಚಿತವಾಗಿ ರಕ್ತ ಗುಂಪು ವರ್ಗೀಕರಣ ಶಿಬಿರವು ನವೆಂಬರ್ 25ರಂದು ಸೆರ್ಕಳ ಶಾಲಾ ಹಾಗೂ ಕಡಂಬು ಶಾಲೆಗಳಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸೆರ್ಕಳ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಕೆ ಅಶ್ರಫ್ , ಮುಖ್ಯೋಪಾಧ್ಯಯರಾದ ದಾಮೋದರ, ಸ್ಥಳೀಯ ಪಂಚಾಯತ್ ಸದಸ್ಯರಾದ ಸಿ.ಹೆಚ್ ರಝಾಕ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲ್ ಮತ್ತು ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಇದರ ಸಲಹೆಗಾರರಾದ ಲತೀಫ್ ಪರ್ತಿಪ್ಪಾಡಿ, ಲತೀಫ್ ಜೆ.ಬಿ. ಸೆರ್ಕಳ, ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್, ಸದಸ್ಯರಾದ ಶರೀಫ್ ಕುಲ್ಯಾರ್, ಅಶ್ರಫ್ ಸಅದಿ ಸೆರ್ಕಳ, ಹಾಗೂ ಅಧ್ಯಾಪಕ ವೃಂದದವರು ಮತ್ತು ಕಡಂಬು ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿದರು. ಮುಖ್ಯೋಪಾಧ್ಯಯರಾದ ದಾಮೋದರ ರವರು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com