janadhvani

Kannada Online News Paper

ಎಸ್ಸೆಸ್ಸೆಪ್ ಉಡುಪಿ ಡಿವಿಷನ್: ಸ್ವಾತಂತ್ರ್ಯ ದಿನಾಚರಣೆ

ಉಡುಪಿ ; SSF ಉಡುಪಿ ಡಿವಿಷನ್ ವತಿಯಿಂದ ಡಿವಿಷನ್ ಕಛೇರಿ ಅಂಬಾಗಿಲು ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು. ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಂ ಪಾಲಿಲಿ ಮಣಿಪುರ ಇವರ ಅಧ್ಯಕ್ಷತೆಯಲ್ಲಿ, ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು. ಡಿವಿಷನ್ ಅಧ್ಯಕ್ಷರೊಂದಿಗೆ, ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಥಳೀಯ ಉದ್ಯಮೀ ಲಕ್ಷ್ಮಣ್ ಮತ್ತು ಹಿರಿಯ ನಾಯಕರಾದ ರಶೀದ್ ಉಸ್ತಾದ್ ಕಟಪಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಜುಲ್ ಉಲಮಾ ರಿಲೀಫ್ ಸೆಲ್ ಚೇರ್ಮೆನ್ ರಝಾಕ್ ಉಸ್ತಾದ್ ಅಂಬಾಗಿಲು, HSDF ಚೇರ್ಮನ್ ಮಜೀದ್ ಕಟಪಾಡಿ, ಅತಿಥಿಯಾದ ರಿಝ್ವಾನ್ ಕೃಷ್ಟಾಪುರ, ಡಿವಿಷನ್ ಸದಸ್ಯರಾದ ಶಂಶುದ್ದೀನ್ ಆರ್.ಕೆ, ನಾಸೀರ್ ಬಿಕೆ, ನಝೀರ್ ಸಾಸ್ತಾನ, ರಹೀಂ, ಮುತ್ತಲಿಬ್, ಇಬ್ರಾಹಿಂ, ಸುಲೈಮಾನ್ ರಂಗನಕೆರೆ, ಬಿಲಾಲ್ ಮಲ್ಪೆ, ಶಾಹಿಲ್ ಹೂಡೆ, ನವಾಝ್ ಉಡುಪಿ, ಇರ್ಫಾನ್ ಸಂತೋಷ್ ನಗರ, ಫವಾಝ್ ದೊಡ್ಡಣಗುಡ್ಡೆ, ಅಲ್ಫಾಝ್ ಕಟಪಾಡಿ, ಮುಸ್ತಫಾ ಮಾಸ್ಟರ್, ಆಶಿಕ್ ಸರಕಾರಿಗುಡ್ಡೆ ಹಾಗೂ ಇನ್ನಿತರರು ಉಪಸ್ಥಿತಿ ಇದ್ದರು.

ಡಿವಿಷನ್ ಪ್ರ. ಕಾರ್ಯದರ್ಶಿ ಸಿದ್ದೀಕ್ ಸ್ವಾಗತಿಸಿದರು, ಕೋಶಾಧಿಕಾರಿ ಇಮ್ತಿಯಾಝ್ ಸಂತೋಷ್ ನಗರ ವಂದಿಸಿದರು.

error: Content is protected !! Not allowed copy content from janadhvani.com