janadhvani

Kannada Online News Paper

ಬದ್ರಿಯಾ ಜುಮಾ ಮಸ್ಜಿದ್ ಹಿರೆಬಂಡಾಡಿ ಇದರ ಆಡಳಿತ ಸಮಿತಿಗೆ ನವ ಸಾರಥ್ಯ

ಬದ್ರಿಯಾ ಜುಮಾ ಮಸ್ಜಿದ್ ಹಿರೆಬಂಡಾಡಿ ಪುತ್ತೂರು ತಾಲೂಕು ದಕ್ಷಿಣ ಕನ್ನಡ ಇದರ 2022-23 ನೇ ಸಾಲಿನ ಮಹಾಸಭೆಯು ದಿನಾಂಕ 19/05/2023ರ ಶುಕ್ರವಾರ ಜುಮಾ ನಮಾಝಿನ ಬಳಿಕ ಬಹು ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ ಪುತ್ತೂರು ಇವರ ಗೌರವಾಧ್ಯಕ್ಷತೆಯ ಉಪಸ್ಥಿತಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಹಾಜಿ ಬಿ.ಕೆ ಅಬೂಬಕ್ಕರ್ ಕೊಳ್ಳೆಜಾಲ್ ಅವರ ಘನ ಅಧ್ಯಕ್ಷತೆಯಲ್ಲಿ ಜರಗಿತು.ಎಲ್ಲಾ ಅತಿಥಿಗಳನ್ನು, ಜಮಾಅತರನ್ನು ಉಲಮಾ ಉಮರಾ ನೇತಾರರನ್ನು ಒಂದೇ ಮಾತಿನಲ್ಲಿ ಸ್ವಾಗತಿಸಲಾಯಿತು.ವರದಿವಾಚನ ಮತ್ತು ಲೆಕ್ಕಪತ್ರ ವನ್ನು ಪ್ರಧಾನ ಕಾರ್ಯದರ್ಶಿ ಹಾಜಿ ಎ ಎಚ್ ನಾಸಿರ್ ಮಾಸ್ತರ್ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು.2023-24 ನೇ ಸಾಲಿನ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ
ಹಾಜಿ ಅಬೂಬಕ್ಕರ್ ಬಿ.ಕೆ
ಉಪಾಧ್ಯಕ್ಷರಾಗಿ
ಬಿ.ಎಚ್. ಇಲ್ಯಾಸ್ ಮದನಿ
ಪ್ರಧಾನ ಕಾರ್ಯದರ್ಶಿ
ಹಾಜಿ ಎ ಎಚ್ ನಾಸಿರ್ ಮಾಸ್ತರ್
ಜೊತೆ ಕಾರ್ಯದರ್ಶಿಗಳಾಗಿ
ಅಬ್ದುಲ್ ಹಮೀದ್ ಮುರ
ಅಬ್ದುಲ್ ಖಾದರ್ ಬಿ.ಟಿ.ಎಂ
ಕೋಶಾಧಿಕಾರಿ
ಹಾಜಿ ಅಬ್ದುಲ್ ಖಾದರ್ ಬಿ.ಕೆ
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ,
ಬಿ.ಕೆ ಯಾಕುಬ್ ಹಾಜಿ ಕೊಳ್ಳೆಜಾಲ್
ಬಿ.ಕೆ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೆಜಾಲ್
ಮುಹಮ್ಮದ್ ಹಾಜಿ ಬಿ.ಟಿ.ಎಂ
ಹಮ್ಮಬ್ಬ ಶೌಕತ್ ಅಲಿ
ಹಸೈನಾರ್ ಹಾಜಿ
ಸಲೀಂ ಮುರ
ಮುಹಮ್ಮದ್ ಅಂಗಡಿ
ಇಸ್ಮಾಯಿಲ್ ಪುಳಿತ್ತಡಿ
ಸುಲೈಮಾನ್ ಅಲ್ ಸಫಾ
ಆದಂ ಎರ್ಪೆ
ಮೊಹಮ್ಮದ್ ಪಲ್ಲೆಜಾಲು
ಕಾಸಿಂ ಬಾಳೆಹಿತ್ತಿಲು
ಯಾಕುಬ್ ಬೆರೆಡೇಲ್
ಸುಲೈಮಾನ್ ಪುಳಿತ್ತಡಿ
ಇವರುಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಒಮ್ಮತದ ಮೂಲಕ ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ಸಿದ್ದೀಕ್ ಹಾಜಿ ಮೇದರಬೆಟ್ಟುರನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿ ಹಾಜಿ ಎ.ಎಚ್.ನಾಸಿರ್ ಮಾಸ್ತರ್ ರವರ ಧನ್ಯವಾದಗೈದರು.

error: Content is protected !! Not allowed copy content from janadhvani.com