ಉಳ್ಳಾಲ: ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾದ ನಿರ್ದೇಶನದಲ್ಲಿ ಸುನ್ನೀ ಸಂಘ ಕುಟುಂಬದ ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಸುನ್ನೀ ಯುವಜನ ಸಂಘ (SჄS) ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಸಂಯುಕ್ತ ಸದಸ್ಯತನ ಅಭಿಯಾನವು “ಒಳಿತಿನ ಹೆದ್ದಾರಿಯಲ್ಲಿ ನಿಮ್ಮದ್ದೂ ಒಂದು ಹೆಜ್ಜೆ ಇರಲಿ” ಎಂಬ ಘೋಷ ವಾಕ್ಯದೊಂದಿಗೆ ಬರುವ ತಿಂಗಳಲ್ಲಿ ನಡೆಯಲಿದೆ.
ಈ ಅಭಿಯಾನದ ಯಶಸ್ಸಿಗಾಗಿ ಕಿನ್ಯ ಪ್ರದೇಶದ SჄS,SSF ಆಯೋಜಿಸಿದ್ದ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು.
SჄS ದ.ಕ ವೆಸ್ಟ್ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯಾ ಉಸ್ತಾದ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದಸ್ಯತನ ಅಭಿಯಾನದ ರೂಪು ರೇಖೆಗಳ ಬಗ್ಗೆ ಹೃಸ್ವ ಸಂದರ್ಭದಲ್ಲಿ ಮನಮುಟ್ಟುವಂತೆ ಸವಿಸ್ತಾರವಾಗಿ ಅಶ್ಅರಿಯ್ಯಾ ಉಸ್ತಾದ್ ವಿವರಿಸಿದರು, SჄS ಕಿನ್ಯ ಸೆಂಟರ್ ದಅ್’ವಾ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಖಾಫಿ ಖುತುಬಿನಗರ ದಅ್’ವಾ ವಿಷಯವಾಗಿ ಮಾತನಾಡಿ ಉದ್ಘಾಟಿಸಿದರು.
SჄS ಸೆಂಟರ್ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
SჄS ಕಿನ್ಯ ಸೆಂಟರ್ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್, ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್,ಟೀಂ ಇಸಾಬ ಅಮೀರ್ ಅಬೂಬಕರ್ ಖುತುಬಿನಗರ,ಇಝ್ಝುದ್ದೀನ್ ಅಹ್ಸನಿ ಕಿನ್ಯ,SSF ಕಿನ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಷೀರ್ ಕೂಡಾರ,SჄS ಕಿನ್ಯ ಸೆಂಟರ್ ಸಾಮಾಜಿಕ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ, ವಿ.ಎ ಮುಹಮ್ಮದ್ ಮುಸ್ಲಿಯಾರ್, ಹಂಝ ಉಸ್ತಾದ್ ಖುತುಬಿನಗರ ಹಾಗೂ ಸೆಂಟರ್ ಸಮಿತಿ ಸದಸ್ಯರು ಮತ್ತು ಪ್ರತಿ ಬ್ರಾಂಚ್ ಸಮಿತಿಗಳ ಅಧ್ಯಕ್ಷ,ಉಪಾಧ್ಯಕ್ಷ,ಕಾರ್ಯದರ್ಶಿ,ಕೋಶಾಧಿಕಾರಿ ಗಳು ಭಾಗವಹಿಸಿದ್ದರು.
SჄS ಕಿನ್ಯ ಸೆಂಟರ್ ಸಂಘಟನಾ ಕಾರ್ಯದರ್ಶಿ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ ವಂದಿಸಿದರು.