ನೂರೂಲ್ ಹುದಾ ಜುಮಾ ಮಸ್ಜಿದ್ ಬಜಗೋಳಿ ಇದರ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ 75 ವರ್ಷ ತುಂಬಿದ ಸಂಭ್ರಮದ ಅಮೃತ ಮಹೋತ್ಸವವ್ ಮಸ್ಜಿದ್ ಅಧ್ಯಕ್ಷರಾದ ಪುತ್ತಾಕ ಗುರ್ಗಲ್ ಗುಡ್ಡೆ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರ ದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಮಸ್ಜಿದ್ ಅಧ್ಯಕ್ಷರು ಪುತ್ತಾಕ ಹಾಗೂ ಮುಡಾರು ಗ್ರಾಮ ಪಂಚಾಯತ್ ಸದಸ್ಯರು ಆದ ರಜತ್ ರಾಮ್ ಮೋಹನ್ ಧ್ವಜಾರೋಹಣವನ್ನು ನೆರವೇರಿಸಿದರು. ಸಭೆ ಯನ್ನು ಉದ್ದೇಸಿಸಿ ಮಾತನಾಡಿದ ರಜತ್ ರಾಮ್ ಮೋಹನ್, ಎಲ್ಲಾ ಧರ್ಮೀಯರು ಎಲ್ಲಾ ವರ್ಗದವರು ಸಹಬಾಳ್ವೆಯಿಂದ ಬಾಳತಕ್ಕಂತ ಒಂದು ವ್ಯವಸ್ಥೆಯಿದ್ದರೆ ಅದು ನಮ್ಮ ಭಾರತದಲ್ಲಿ ಮಾತ್ರವಾಗಿದೆ ಎಂದು ಸಂದೇಶ ನುಡಿದರು.
ಜುಮಾ ಮಸ್ಜಿದ್ ಇದರ ಖತೀಬರು ಆದ ದಾವೂದ್ ಲತ್ವೀಫಿ ಉಸ್ತಾದ್ ರು ಮಾತನಾಡಿ ಸ್ವತಂತ್ರ ಭಾರತಕ್ಕಾಗಿ ಹೋರಾಟ ಎಷ್ಟು ಸತ್ಯವೋ ಅಷ್ಟೇ ಜಯವೂ ದಕ್ಕಿದೆ. ಸತ್ಯಕ್ಕೆ ಎಂದಿಗೂ ಸೋಲಿಲ್ಲ.
ಸತ್ಯಕ್ಕೆ ಜಯ ಖಚಿತ. ಸ್ವತಂತ್ರ ಭಾರತಕ್ಕಾಗಿ ಹೋರಾಡಿ ಮಡಿದ ಅದೆಷ್ಟೋ ಮಹಾ ನಾಯಕರುಗಳನ್ನು ಸ್ಮರಿಸಲೇ ಬೇಕಾಗಿದೆ ಎಂದರು.
ಜುಮಾ ಮಸ್ಜಿದ್ ಇದರ ಉಪಾಧ್ಯಕ್ಷರು ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ದಿಡಿಂಬಿರಿ, ಆಡಳಿತ ಕಮಿಟಿಯ ಪದಾಧಿಕಾರಿಗಳು, ಜಮಾಅತಿನ ಹಿರಿಯ, ಕಿರಿಯ, ಮದ್ರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು..
ಜುಮಾ ಮಸ್ಜಿದ್ ಇದರ ಪ್ರ. ಕಾರ್ಯದರ್ಶಿ ಸೈಫುಲ್ಲಾ ಪರಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ಧನ್ಯವಾದಗೈದರು.
ವರದಿ- ಸ್ವಾದಿಕ್ ಬಜಗೋಳಿ
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್