janadhvani

Kannada Online News Paper

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ- ನೂತನ ಪದಾಧಿಕಾರಿಗಳು

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ವಾರ್ಷಿಕ ಸಭೆಯು ದಿನಾಂಕ 16 ಜುಲೈ 2022 ಶನಿವಾರದಂದು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ಹನೀಫ್ ವರ್ಷಾ ಅಧ್ಯಕ್ಷತೆಯಲ್ಲಿ ನಡೆಯಿತು.

2021-22ನೇ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಇರ್ಫಾನ್ ಹಂಝ ಮಂಡಿಸಿದರು. ನೂತನ ಸಾಲಿನ ಅಧ್ಯಕ್ಷರಾಗಿ ಇಸ್ಮಾಯಿಲ್ IB, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ವರ್ಷಾ, ಉಪಾಧ್ಯಕ್ಷರಾಗಿ ಮಹಮ್ಮದ್ ಕುದ್ರಡ್ಕ, ಜೊತೆಕಾರ್ಯದರ್ಶಿಯಾಗಿ ಶೈರೋಜ್ ಉದಯ ನಗರ, ಕೋಶಾಧಿಕಾರಿಯಾಗಿ ರಶೀದ್ ಸಂಜಯ ನಗರ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಕ್ಬರ್ ಬೆಳ್ತಂಗಡಿ, ಬಷೀರ್, ಮೊಯಿದಿನ್ BA, ಗಲ್ಫ್ ಪ್ರತಿನಿಧಿಗಳಾಗಿ ಅಬ್ಬಾಸ್ ಸೌದಿ ಅರೇಬಿಯಾ, ಶರೀಫ್ ಸೌದಿ ಅರೇಬಿಯಾ, ನಝೀರ್ ಅಬುದಾಬಿ, ಅಬ್ಬಿ ಕತಾರ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಗಣ್ಯ ಅತಿಥಿಗಳಾಗಿ ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾದ ನಝೀರ್ BA, ಕಾಂಗ್ರೆಸ್ ಪಕ್ಷದ ಮುಖಂಡರಾದ ಮೆಹಬೂಬ್ ಸಂಜಯನಗರ, SDPI ಪಕ್ಷದ ಮುಖಂಡರಾದ ನವಾಝ್ ಶರೀಫ್ ಕಟ್ಟೆ ಹಾಗೂ ಸಂಜಯ್ ಗ್ಲೋಬಲ್ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com