janadhvani

Kannada Online News Paper

ಬೆಳ್ತಂಗಡಿ: ಮುಸ್ಲಿಂ ಮುಖಂಡ ಹೈದರ್ ನೀರ್ಸಾಲ್ ನಿಧನ

ಬೆಳ್ತಂಗಡಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ, SDPI ಬೆಳ್ತಂಗಡಿ ವಿಧಾನಸಭಾ ಮಾಜಿ ಅಧ್ಯಕ್ಷ, ಜಮೀಯತುಲ್ ಫಾಲಾಹ್ ಬೆಳ್ತಂಗಡಿ ಘಟಕ ಪ್ರಧಾನ ಕಾರ್ಯದರ್ಶಿ, ಶಿರ್ಲಾಲು ಮಸೀದಿ ಗೌರವಾಧ್ಯಕ್ಷ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಹೈದರ್ ನೀರ್ಸಾಲ್ ಉಜಿರೆ (ಬೆಳ್ತಂಗಡಿ) ಇಂದು ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಪಿಎಫ್ಐ ಬೆಳ್ತಂಗಡಿ ಜಿಲ್ಲಾದ್ಯಕ್ಷರಾದ ಮುಸ್ತಫ ಜಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ಮಂಗಳೂರಿಗೆ ಬೇಟಿ ನೀಡಿದ್ದ ವೇಳೆ ಹೃದಯಾಘಾತಗೊಂಡಿದ್ದ ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮರಣ ಹೊಂದಿರುತ್ತಾರೆ.