janadhvani

Kannada Online News Paper

ಕೊಡಗು: ನೂತನ ನಾಯಕರಿಗೆ ಎಸ್ಎಸ್ಎಫ್‌ನಿಂದ ಸನ್ಮಾನ

ಪಾಲಿಬೆಟ್ಟ: ಕೊಡಗು ಜಿಲ್ಲೆಯ ನೂತನ ಉಪ ಖಾಝಿಯಾಗಿ ನೇಮಿಸಲ್ಪಟ್ಟ ಶಾದುಲಿ ಫೈಝಿ ಆಝಾದ್ ನಗರ ಹಾಗೂ ಸುನ್ನೀ ಜಂಇಯ್ಯತ್ತುಲ್ ಉಲಮಾ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಎಮ್ಮೆಮಾಡುರವರನ್ನು ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕಳೆದ ದಿನ ನಡೆದ ಪ್ರತಿಭೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಶೈಖುನಾ ಮಹ್‌ಮೂದ್ ಉಸ್ತಾದರ ವಿಯೋಗದ ನಂತರ ತೆರವಾಗಿದ್ದ ಈ ಸ್ಥಾನಗಳಿಗೆ ಕೊಡಗು ಜಿಲ್ಲಾ ಪ್ರಧಾನ ಖಾಝಿಯವರಾದ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದರ ನೇತೃದಲ್ಲಿ ಕ್ಯಾಲಿಕಟ್‌ನಲ್ಲಿ ನಡೆದ ಸಭೆಯಲ್ಲಾಗಿತ್ತು ಈ ಆಯ್ಕೆ ಪ್ರಕ್ರಿಯೆ.
ಅದೇ ರೀತಿ ಎಸ್‌ವೈಎಸ್‌ನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸೈಯ್ಯದ್ ಇಲ್ಯಾಸ್ ತಂಙ್ಞಳ್‌ರವರನ್ನೂ ಜಿಲ್ಲಾ ಸಮಿತಿ ಸನ್ಮಾಸಿತು.

ಎಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಸುನ್ನೀ ಸಂಘಟನೆಗಳ ವಿವಿಧ ಉಲಮಾ ಹಾಗೂ ಉಮರಾ ನಾಯಕರು, ಸಾಮಾಜಿಕ ಮುಖಂಡರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com